Asianet Suvarna News Asianet Suvarna News

ಮೋದಿಗೆ ಉತ್ತರ ಕನ್ನಡ ಜಿಲ್ಲೆಯ 6 ಕ್ಷೇತ್ರಗಳನ್ನು ಗಿಫ್ಟ್‌ ಆಗಿ ನೀಡಿ: ಪ್ರಹ್ಲಾದ ಜೋಶಿ

ಅಂಕೋಲಾದಲ್ಲಿ ಪ್ರಧಾನಿ ಮೋದಿ ಮತಬೇಟೆ
ಮೋದಿ ಬಡವರ ಬಂಧುವೆಂದ ಪ್ರಹ್ಲಾದ ಜೋಶಿ
40 ವರ್ಷದ ನಂತರ ಅಂಕೋಲಾಗೆ ಪ್ರಧಾನಿ

ಉತ್ತರ ಕನ್ನಡ: ಜಿಲ್ಲೆಯ ಅಂಕೋಲಾದ ಹಟ್ಟಿಕೇರಿಯಲ್ಲಿ ಬಿಜೆಪಿ ಬೃಹತ್‌ ಸಮಾವೇಶ ನಡೆಯಿತು. ಇಲ್ಲಿಗೆ ಬಂದ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದ್ದು, ಸಂಪ್ರದಾಯ ಕಲೆಯಾದ ಯಕ್ಷಗಾನದ ಕಿರೀಟ ತೊಡಿಸಿ ಬಿಜೆಪಿ ನಾಯಕರು ಸನ್ಮಾನ ಮಾಡಿದ್ದಾರೆ. ಮೋದಿ ಸಮಾವೇಶ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ನೆರೆದಿದ್ದರು. ಈ ಸಮಾವೇಶದಲ್ಲಿ ಪ್ರಹ್ಲಾದ ಜೋಶಿ ಮಾತನಾಡಿ,  ಮೋದಿಯವರು ಬಡವರಿಗಾಗಿ ಸರ್ಕಾರ ನಡೆಸುತ್ತಿದ್ದಾರೆ. 40 ವರ್ಷಗಳ ನಂತರ ಒಬ್ಬ ಪ್ರಧಾನಿ ಉತ್ತರಕನ್ನಡ ಜಿಲ್ಲೆಗೆ ಬಂದಿದ್ದಾರೆ. ಅವರಿಗೆ ನೀವು ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳನ್ನು ಗಿಫ್ಟ್‌ ಆಗಿ ಕೊಡ್ತಿರಾ ? ಎಂದು ಮತದಾರರನ್ನು ಪ್ರಶ್ನಿಸಿದ್ರು. ಅಲ್ಲದೇ ನಮ್ಮ ಪ್ರಧಾನಿಯವರನ್ನು ಖರ್ಗೆ ಮತ್ತು ಅವರ ಪುತ್ರ ಅತ್ಯಂತ ಕೆಟ್ಟ ಹಾಗೂ ಅಸಭ್ಯ ಭಾಷೆಯಲ್ಲಿ ನಿಂದಿಸಿದ್ದಾರೆ. ಅವರಿಗೆ ನೀವು ಮೇ.10 ರಂದು ಉತ್ತರ ಕೊಡುತ್ತೀರಿ ಎಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದರು.

Video Top Stories