Asianet Suvarna News Asianet Suvarna News

ಮತ್ತೆ ಅರೆಸ್ಟ್ ಆದ್ರೆ ಡಿಕೆಶಿಗೆ ಲಾಭನಾ? ನಷ್ಟನಾ?

ಕನಕಪುರ ಬಂಡೆ ಡಿಕೆ ಶಿವಕುಮಾರ್ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ ಮಾಡಿದೆ. ದೆಹಲಿ, ಮುಂಬೈ, ಬೆಂಗಳೂರು ಹಾಗೂ ತವರು ಕ್ಷೇತ್ರ ಕನಕಪುರ ಸೇರಿದಂತೆ ಬೇರೆ ಬೇರೆ ಕಡೆ ದಾಳಿಯಾಗಿದೆ. 

ಬೆಂಗಳೂರು (ಅ. 06): ಕನಕಪುರ ಬಂಡೆ ಡಿಕೆ ಶಿವಕುಮಾರ್ ಸಾಮ್ರಾಜ್ಯದ ಮೇಲೆ ಸಿಬಿಐ ದಾಳಿ ಮಾಡಿದೆ. ದೆಹಲಿ, ಮುಂಬೈ, ಬೆಂಗಳೂರು ಹಾಗೂ ತವರು ಕ್ಷೇತ್ರ ಕನಕಪುರ ಸೇರಿದಂತೆ ಬೇರೆ ಬೇರೆ ಕಡೆ ದಾಳಿಯಾಗಿದೆ. ಶಿರಾ ಹಾಗೂ ಆರ್ ಆರ್‌ ನಗರ ಉಪಚುನಾವಣೆ ಹಾಗೂ 4 ವಿಧಾನಪರಿಷತ್ ಕ್ಷೇತ್ರಗಳಲ್ಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ಸಮಯದಲ್ಲಿ ದಾಳಿ ನಡೆದಿರುವುದು ಶಾಕ್ ನೀಡಿದೆ.  

ಐದೇ ವರ್ಷದಲ್ಲಿ ಡಿಕೆಶಿ ಆದಾಯ ಶೇ. 45 ರಷ್ಟು ವೃದ್ದಿಯಾಗಿದ್ದೇಗೆ?

ಈ ದಾಳಿಯನ್ನು ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಕಳೆದ ಬಾರಿ ಆದಾಯ ತೆರಿಗೆ ಇಲಾಖೆ ದಾಳಿ ನಡೆದು ಜೈಲು ಸೇರಿದ್ದಕ್ಕೆ ಕೆಪಿಸಿಸಿ ಪಟ್ಟ ಸಿಕ್ಕಿತ್ತು. ಈ ದಾಳಿ ಉಪಚುನಾವಣೆಗೂ ಸಂಬಂಧ ಇದೆಯಾ? ಡಿಕೆಶಿ ಭವಿಷ್ಯ ಬರೆಯಲಿದೆಯಾ ಈ ದಾಳಿ? ಪೊಲಿಟಿಕಲ್ ಇನ್‌ಸೈಡ್ಸ್‌ ಇಲ್ಲಿದೆ ನೋಡಿ..!