Asianet Suvarna News Asianet Suvarna News

ಖಾತೆ ಕ್ಯಾತೆ: ಈ ಆಟಕ್ಕಿಲ್ಲ ಎಂದ ಇಬ್ಬರು ಸಚಿವರು, ಏಕಾಂಗಿಯಾದ ಆನಂದ್ ಸಿಂಗ್...!

 ಖಾತೆ ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಎಂಟಬಿ ನಾಗರಾಜ್ ಅವರನ್ನು ಬೊಮ್ಮಾಯಿ ಅವರು ಸಮಾಧಾನಪಡಿಸಿದ್ದಾರೆ. ಇದೀಗ ಉಳಿದಿರುವುದು ಆನಂದ್ ಸಿಂಗ್ ಮಾತ್ರ. ಆದ್ರೆ, ಖಾತೆಗಾಗಿ ಆನಂದ್ ಸಿಂಗ್ ಏಕಾಂಗಿಯಾಗಿ ಹೋರಾಟ ನಡೆಸಿಸುತ್ತಿದ್ದಾರೆ. ರಾಜೀನಾಮೆ ನೀಡುವ ಹಂತಕ್ಕೂ ಹೋಗಿರುವುದು ಸಿಎಂ  ಬಸವರಾಜ ಬೊಮ್ಮಾಯಿ ಅವರಗೆ ದೊಡ್ಡ ತಲೆನೋವಾಗಿದೆ. ಇನ್ನು ಈ ಬಗ್ಗೆ ಎಂಟಿಬಿ ಹೇಳಿದ್ದೇನು ಎನ್ನುವುದು ಇಲ್ಲಿದೆ.

ಬೆಂಗಳೂರು, (ಆ.11):  ನೂತನ ಸಂಪುಟ ರಚನೆ, ನೂತನ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ  ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಈ ಮೊದಲು ಶ್ರೀರಾಮು, ಎಂಟಿಬಿ ನಾಗರಾಜ್ ಹಾಗೂ ಆನಂದ್ ಸಿಂಗ್ ಖಾತೆ ಬಗ್ಗೆ ಅಸಮಾಧಾನಗೊಂಡಿದ್ರು.

ಸಚಿವ ಶ್ರೀರಾಮುಲು ಖಡಕ್ ಮಾತು: ಎಲ್ಲಾ ಊಹಾಪೋಹಗಳಿಗೆ ತೆರೆ

ಬಳಿಕ ರಾಮುಲು ನನಗೆ ಯಾವದೇ ಅಸಮಾಧಾನ ಇಲ್ಲ ಕೊಟ್ಟ ಖಾತೆಯಲ್ಲಿ ಖುಷಿ ಎಂದು ಸ್ಪಷ್ಟಪಡಿಸಿದರು. ಇನ್ನು ಖಾತೆ ಬದಲಾವಣೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದ ಎಂಟಬಿ ನಾಗರಾಜ್ ಅವರನ್ನು ಬೊಮ್ಮಾಯಿ ಅವರು ಸಮಾಧಾನಪಡಿಸಿದ್ದಾರೆ. ಇದೀಗ ಉಳಿದಿರುವುದು ಆನಂದ್ ಸಿಂಗ್ ಮಾತ್ರ. ಆದ್ರೆ, ಖಾತೆಗಾಗಿ ಆನಂದ್ ಸಿಂಗ್ ಏಕಾಂಗಿಯಾಗಿ ಹೋರಾಟ ನಡೆಸಿಸುತ್ತಿದ್ದಾರೆ. ರಾಜೀನಾಮೆ ನೀಡುವ ಹಂತಕ್ಕೂ ಹೋಗಿರುವುದು ಸಿಎಂ  ಬಸವರಾಜ ಬೊಮ್ಮಾಯಿ ಅವರಗೆ ದೊಡ್ಡ ತಲೆನೋವಾಗಿದೆ. ಇನ್ನು ಈ ಬಗ್ಗೆ ಎಂಟಿಬಿ ಹೇಳಿದ್ದೇನು ಎನ್ನುವುದು ಇಲ್ಲಿದೆ.

Video Top Stories