MTB ತಂದ ಅನುದಾನಕ್ಕೆ ಅಪ್ಪ-ಮಕ್ಕಳ ಗುದ್ದಲಿ ಪೂಜೆ: BSY ಮನೆಗೆ ಓಡಿದ ನಾಗರಾಜ್
ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಎಂಟಿಬಿ ನಾಗರಾಜು ಮತ್ತೆ ಎದುರಾಳಿ ಶರತ್ ಬಚ್ಚೇಗೌಡ ವಿರುದ್ಧ ಆರೋಪ ಮಾಡಿದ್ದಾರೆ. ಹೊಸಕೋಟೆ ವಿಧಾನಸಭಾ ಬೈ ಎಲೆಕ್ಷನ್ ವೇಳೆ ಪಕ್ಷದ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಸಂಸದ ಬಿಎನ್ ಬಚ್ಚೇಗೌಡ ಅವರು ಪ್ರಚಾರ ಮಾಡುವುದು ಬಿಟ್ಟು ನಾಪತ್ತೆಯಾಗಿದ್ದರು. ಮಗ ನಿಂತಿರುವ ಕಾರಣದಿಂದ ಬಚ್ಚೇಗೌಡ್ರು ಕ್ಷೇತ್ರದಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಎಂಟಿಬಿ ರಾಜ್ಯ ಬಿಜೆಪಿ ನಾಯಕರಿಗೆ ದೂರು ನೀಡಿದ್ದಾರೆ.
ಬೆಂಗಳೂರು, [ಡಿ.26]: ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಎಂಟಿಬಿ ನಾಗರಾಜು ಮತ್ತೆ ಎದುರಾಳಿ ಶರತ್ ಬಚ್ಚೇಗೌಡ ವಿರುದ್ಧ ಆರೋಪ ಮಾಡಿದ್ದಾರೆ.
ಸೋತ ಎಂಟಿಬಿ ಆರೋಪಕ್ಕೆ ತಂದೆ ಬಚ್ಚೇಗೌಡರ ಪರ ನಿಂತ ಶರತ್
ಹೊಸಕೋಟೆ ವಿಧಾನಸಭಾ ಬೈ ಎಲೆಕ್ಷನ್ ವೇಳೆ ಪಕ್ಷದ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಸಂಸದ ಬಿಎನ್ ಬಚ್ಚೇಗೌಡ ಅವರು ಪ್ರಚಾರ ಮಾಡುವುದು ಬಿಟ್ಟು ನಾಪತ್ತೆಯಾಗಿದ್ದರು. ಮಗ ನಿಂತಿರುವ ಕಾರಣದಿಂದ ಬಚ್ಚೇಗೌಡ್ರು ಕ್ಷೇತ್ರದಿಂದ ದೂರವಾಗಿದ್ದರು. ಈ ಹಿನ್ನೆಲೆಯಲ್ಲಿ ಎಂಟಿಬಿ ರಾಜ್ಯ ಬಿಜೆಪಿ ನಾಯಕರಿಗೆ ದೂರು ನೀಡಿದ್ದಾರೆ.
ಆದ್ರೆ, ಇದೀಗ ಎಂಟಿಬಿ ನಾಗರಾಜ್ ತಂದಿರುವ ಅನುದಾನಕ್ಕೆ ಮಾತ್ರ ಅಪ್ಪ ಮಕ್ಕಳು ಸೇರಿ ಗುದ್ದಲಿ ಪೂಜೆ ಮಾಡಿದ್ದಾರೆ. ಇದ್ರಿಂದ ಎಂಟಿಬಿ ಕೆಂಡಾಮಂಡಲರಾಗಿದ್ದು, ಸಿಎಂ ಮನೆಗೆ ಹಠಾತ್ ಭೇಟಿ ನೀಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು ಅಪ್ಪ ಹಾಗೂ ಮಗನ ವಿರುದ್ಧ ಆರೋಪ ಮಾಡಿದ್ದಾರೆ. ಅದು ವಿಡಿಯೋನಲ್ಲಿ ನೋಡಿ....