Asianet Suvarna News Asianet Suvarna News

ಹುಣಸೂರು ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ: ತೇಪೆಹಚ್ಚಲು ಮುಂದಾದ ಶಾಸಕ‌ ಜಿ.ಟಿ.ದೇವೇಗೌಡ

ಹುಣಸೂರಿನಲ್ಲಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಅಸಮಾಧಾನ ಹೋಗಲಾಡಿಸಲು ಶಾಸಕ‌ ಜಿ.ಟಿ.ದೇವೇಗೌಡ ಹಾಗೂ ಪುತ್ರ ಹರೀಶ್‌ ಗೌಡ ಮುಂದಾಗಿದ್ದು, ಜೆಡಿಎಸ್ ಅಸಮಾಧಾನಿತರೊಂದಿಗೆ ಅಪ್ಪ ಮಕ್ಕಳು ಸಭೆ ನಡೆಸಿದ್ದಾರೆ.

ಮೈಸೂರು (ಜ.22): ಹುಣಸೂರಿನಲ್ಲಿ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಅಸಮಾಧಾನ ಹೋಗಲಾಡಿಸಲು ಶಾಸಕ‌ ಜಿ.ಟಿ.ದೇವೇಗೌಡ ಹಾಗೂ ಪುತ್ರ ಹರೀಶ್‌ ಗೌಡ ಮುಂದಾಗಿದ್ದು, ಜೆಡಿಎಸ್ ಅಸಮಾಧಾನಿತರೊಂದಿಗೆ ಅಪ್ಪ ಮಕ್ಕಳು ಸಭೆ ನಡೆಸಿದ್ದಾರೆ. ಹೌದು! ಟಿಕೆಟ್ ಅಕಾಂಕ್ಷಿ ದೇವರಾಜ್ ಒಡೆಯರ್ ಮತ್ತಿತರಲ್ಲಿ ಭಿನ್ನಮತ ಉಂಟಾಗಿದ್ದು, ಜೆಡಿಎಸ್ ಅಸಮಾಧಾನಿತರ ಓಲೈಕೆಗೆ ಅಪ್ಪ ಮಕ್ಕಳು ಮುಂದಾಗಿದ್ದಾರೆ. ಪುತ್ರನ ಹಾದಿ ಸುಗಮಗೊಳಿಸಲು ಜಿ.ಟಿ.ದೇವೇಗೌಡ ಯತ್ನಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮುಖಂಡರ ಜೊತೆ ಸಭೆಯನ್ನು ನಡೆಸಿದ್ದಾರೆ. ಇನ್ನು ಅಸಮಾಧಾನಿತ ತಮ್ಮತ್ತ ಸೆಳೆಯುವಲ್ಲಿ ಜಿ.ಟಿ.ದೇವೇಗೌಡ ಕೊನೆಗೂ ಯಶಸ್ವಿಯಾಗಿದ್ದು, ನಿಮ್ಮ ಬೆಂಬಲ ಸಹಕಾರ ನಮ್ಮೊಂದಿಗಿರಲಿ. ಕ್ಷೇತ್ರದಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟನೆಯನ್ನು ಮಾಡೋಣ. ನಿಮ್ಮ ಯಾವುದೇ ಸಲಹೆಯನ್ನು ಸದಾ ಸ್ವೀಕರಿಸುತ್ತೀನಿ. ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದಿದ್ದಾರೆ.