Asianet Suvarna News Asianet Suvarna News

ಮಹಾರಾಷ್ಟ್ರದ ಬೆಳವಣಿಗೆ ಕರ್ನಾಟಕದಲ್ಲೂ ನಡೆಯುತ್ತೆ! ಈಶ್ವರಪ್ಪ ಸ್ಫೋಟಕ ಹೇಳಿಕೆ

ಕಾಂಗ್ರೆಸ್ ಸರ್ಕಾರ ಮೂರು ತಿಂಗಳು ಇರೋದಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲೂ ಆಗಲಿದೆ‌. ಕರ್ನಾಟಕದ ಅಜಿತ್ ಪವಾರ್ ಕಾಯ್ತಾ ಇದ್ದಾನೆ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

First Published Jul 4, 2023, 6:21 PM IST | Last Updated Jul 4, 2023, 6:21 PM IST

ಬೆಂಗಳೂರು (ಜು.4): ಕಾಂಗ್ರೆಸ್ ಸರ್ಕಾರ ಮೂರು ತಿಂಗಳು ಇರೋದಿಲ್ಲ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲೂ ಆಗಲಿದೆ‌. ಕರ್ನಾಟಕದ ಅಜಿತ್ ಪವಾರ್ ಕಾಯ್ತಾ ಇದ್ದಾನೆ. ಈಗಿನ ಮುಖ್ಯಮಂತ್ರಿ ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಈ ಸರ್ಕಾರ ಇನ್ನು ಮೂರು ತಿಂಗಳು ಇರೋದಿಲ್ಲ ಎಂದು  ಎಂದು ಕೆ.ಎಸ್‌ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಜೊತೆಗೆ ಕೇರಳ ಸ್ಟೋರಿ ಸಿನಿಮಾ ನಾನು ಫ್ರೀ ಆಗಿ ತೋರಿಸ್ತಿನಿ ಬನ್ನಿ ಎಂದು  ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಸವಾಲು ಹಾಕಿದ್ದು, ಮತಾಂತರ ನಿಷೇದ ಕಾಯ್ದೆ ಬಿಲ್ ವಾಪಸ್ ಪಡೆಯುತ್ತಿರೊ? ಗೋಹತ್ಯೆ ನಿಷೇದ ಕಾಯ್ದೆ ವಾಪಸ್ ಮಾಡ್ತಿರಾ? ಮಾಡಿ ನೋಡೋಣ. ನಿಮ್ಮ ತಾಯಿ ತಂಗಿಗೆ ಹೋಗಿ ಮನೆಯಲ್ಲಿ ಕೇಳಿ. ಗೋವು ಕೊಲ್ಲೋದಕ್ಕೆ ನಿಮ್ಮ ಒಪ್ಪಿಗೆ ಇದೆಯಾ ಎಂದು ಕೇಳಿ. ಮನೆಯಲ್ಲಿ ನಿಮಗೆ ಅನ್ನ ಹಾಕಲ್ಲ ಎಂದು ಕಿಡಿಕಾರಿದ್ದಾರೆ.

Video Top Stories