Asianet Suvarna News Asianet Suvarna News

'ಹಳ್ಳಿಹಕ್ಕಿ'ಗೆ ಬೇಕೆ ಬಿರುದು ಸನ್ಮಾನ... ಪ್ರಮಾಣ ವಚನ!

ಸಚಿವ ಸಂಪುಟ ವಿಸ್ತರಣೆ ಮುಗಿಯಿತು/ ಹಳ್ಳಿ ಹಕ್ಕಿ ವಿಶ್ವನಾಥ್ ಗೆ ಸಿಗದ ಸ್ಥಾನ/ ಸ್ನೇಹಿತರಿಗೆ ಶುಭಾಶಯ ಹೇಳಿದ ವಿಶ್ವನಾಥ್/

ಬೆಂಗಳೂರು(ಫೆ. 06)  ಸಚಿವ ಸಂಪುಟ ವಿಸ್ತರಣೆಯಾಗಿದೆ. ಸೋತವರಿಗೆ ಸ್ಥಾನ ಸಿಕ್ಕಿಲ್ಲ. ಎಂಟಿಬಿ ನಾಗರಾಜ್ ಮತ್ತು ಎಚ್. ವಿಶ್ವನಾಥ್ ಸಂಪುಟದಿಂದ ಹೊರಗೆ ಉಳಿದಿದ್ದಾರೆ.

ಶಂಕರ್ ಆಸೆ ಇನ್ನು ಬತ್ತಿಲ್ಲ.. ಒಂದು ಬಾಗಿಲು ತೆರೆದಿದೆ!

ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಶ್ವನಾಥ್ ಬಂದಿದ್ದರು. ನನ್ನೆಲ್ಲಾ ಸ್ನೇಹಿತರಿಗೆ ಶುಭಾಶಯ ಕೋರುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆ ನಾನು ಮಾತನಾಡಿದ್ದೇನೆ, ಸ್ವಲ್ಪ ಸಮಯ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ ಎಂದು ಹೇಳೀ ಹೆಜ್ಜೆ ಹಾಕಿದರು.