Asianet Suvarna News Asianet Suvarna News

ಮುಗಿದ ಸಮರ..ಸತ್ಯವಾಗುತ್ತಾ ಸಮೀಕ್ಷೆ ಹೇಳಿದ ಭವಿಷ್ಯ..?

ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದೇ  ಎಕ್ಸಿಟ್‌ ಪೋಲ್‌ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ರಾಷ್ಟ್ರೀಯ, ಏಜೆನ್ಸಿಗಳಿಂದ ನಾನಾ ರೀತಿಯ ಚಿತ್ರ ವಿಚಿತ್ರ ಅಂಕಿ ಅಂಶಗಳು ಹೊರಬಿದ್ದಿವೆ. ಆದರೆ ಅಂಥಾ 11 ಪ್ರಮುಖ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಲಾಯ್ತು. 3 ಸಮೀಕ್ಷೆಗಳು ಬಿಜೆಪಿಗೆ ಬಹುಮತ ಅಂತ ಹೇಳಿದೆ. 

ವಿಧಾನಸಭೆ ಚುನಾವಣೆ ಮತದಾನ ಮುಗಿದಿದ್ದೇ  ಎಕ್ಸಿಟ್‌ ಪೋಲ್‌ ಸಮೀಕ್ಷೆಗಳ ಭರಾಟೆ ಶುರುವಾಗಿದ್ದು, ರಾಷ್ಟ್ರೀಯ, ಏಜೆನ್ಸಿಗಳಿಂದ ನಾನಾ ರೀತಿಯ ಚಿತ್ರ ವಿಚಿತ್ರ ಅಂಕಿ ಅಂಶಗಳು ಹೊರಬಿದ್ದಿವೆ. ಆದರೆ ಅಂಥಾ 11 ಪ್ರಮುಖ ಸಮೀಕ್ಷೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಲಾಯ್ತು. 3 ಸಮೀಕ್ಷೆಗಳು ಬಿಜೆಪಿಗೆ ಬಹುಮತ ಅಂತ ಹೇಳಿದೆ. ಆದರೆ ಅದನ್ನೆಲ್ಲಾ ಸರಾಸರಿ ಮಾಡಿ ನೋಡುವುದಾರೆ. ಉತ್ತರವಾಗಿ ಸಿಕ್ಕಿದ್ದು ಅತಂತ್ರ ಸರ್ಕಾರ. 
ಮತಗಟ್ಟೆ ಸಮೀಕ್ಷೆಗಳು ಇದಮಿತ್ಥಂ ಅಂತ ಕರಾರುವಾಕ್ಕಾಗಿ ನಂಬರ್ಸ್ ಕೊಡೋದಿಲ್ಲ. ಆದರೆ ರಾಜ್ಯದಲ್ಲಿ ಟ್ರೆಂಡ್ ಏನಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ .ಮುಂಚಿನಿಂದಲೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಮ್ಯಾಜಿಕ್ ನಂಬರ್ 141 ಅಂತ ಹೇಳುತ್ತಲೇ ಇದ್ದು, ಒಂದು ಸಮೀಕ್ಷೆಯಲ್ಲಿ ಆ ನಂಬರ್ ಕೂಡ ಸಿಕ್ಕಾಗಿದೆ.. ಇನ್ನು ಮಾಜಿ ಸಿ ಎಮ್ ಸಿದ್ದರಾಮಯ್ಯ ನಂಬರ್ ಕೂಡ, ಕೆಲ ಸಮೀಕ್ಷೆಗಳಲ್ಲಿ ಬಂದಿದೆ. ಕೇಂದ್ರದ ಹಾಗೂ ರಾಜ್ಯದ ಇಂಟಲಿಜೆನ್ಸ್ ಕೂಡ, ಕಾಂಗ್ರೆಸ್ ಈ ಬಾರಿ ಮುನ್ನಡೆ ಸಾಧಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿವೆ.  ಆದರೂ ಈ ಬಾರಿಯ ಫಲಿತಾಂಶವೂ ಕೂಡ ಅತಂತ್ರವಾಗುತ್ತಾ ಎನ್ನುವ  ಪ್ರಶ್ನೆ ದೊಡ್ಡದಾಗಿದೆ.