Asianet Suvarna News Asianet Suvarna News

ಇದು ಅಧಿಕಾರವಲ್ಲ ನಮ್ಮ ಮೇಲೆ ಇಟ್ಟ ನಂಬಿಕೆ :ಡಿ ಕೆ ಶಿವಕುಮಾರ್‌

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಡಿಕೆ ಶಿವಕುಮಾರ್.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನೊಂದಿಗೆ ಸರ್ಕಾರ ರಚಿಸಲು ಸಜ್ಜಾಗಿದೆ. ಗೆಲುವಿನ ಕುರಿತು ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಡಿಕೆ ಶಿವಕುಮಾರ್. ಪಕ್ಷದ ಕಾರ್ಯಕರ್ತರು , ನಾಯಕರ ಒಗ್ಗಟ್ಟಿನ ಪರಿಶ್ರಮದಿಂದ ಗೆಲುವು ಸಾಧ್ಯವಾಗಿದೆ.  ಕಾಂಗ್ರೆಸ್‌ ಗೆದ್ದಿರುವುದು ಅಧಿಕಾರವಲ್ಲ ನಮ್ಮ ಮೇಲೆ ಇಟ್ಟಂತ ನಂಬಿಕೆ ಮತ್ತು ಜವಾಬ್ದಾರಿ ಎಂದು ಹೇಳಿದ್ದಾರೆ. ಇನ್ನು 1,22,392 ಮತಗಳ ಅಂತರದ ದಾಖಲೆಯ ಗೆಲುವು ಸಾಧಿಸಿದ್ದೇನೆ.  ರಾಮನಗರದ ಮೂರು ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಇದು ನಮ್ಮ ಜಯ ಅಲ್ಲ   ರಾಮನಗರದ ಜನರ ಜಯ, ಕಾರ್ಯಕರ್ತರ ವಿಜಯ ಎಂದು ಹೇಳಿದರು. ನನಗೆ ಸಹಕಾರ ಕೊಟ್ಟಂತಹ  ಮುಖಂಡರು, ಕಾರ್ಯಕರ್ತರು,  ನಾಯಕರು  ಎಲ್ಲರಿಗೂ ವಂದಿಸುತ್ತೇನೆ ಎಂದು ಹೇಳಿದರು. ಇನ್ನು ನನ್ನ  ಬಗ್ಗೆ ಮಾತನಾಡುವವರಿಗೆ ಜನತೆ ಉತ್ತರ ಕೊಟ್ಟಿದೆ ಎಂದು ಅಭಿಪ್ರಾಯ ಪಟ್ಟರು.