Asianet Suvarna News Asianet Suvarna News

Karnataka Election: ಬೆಂಗಳೂರಿಗೆ ಜೆಡಿಎಸ್‌ನಿಂದ ಪತ್ಯೇಕ ಪ್ರಣಾಳಿಕೆ ಬಿಡುಗಡೆ

ಬೆಂಗಳೂರಿಗೆ ಜೆಡಿಎಸ್‌ನಿಂದ ಪ್ರತ್ಯೇಕ ಪ್ರಣಾಳಿಕೆ
ಮಾಜಿ ಪ್ರಧಾನಿ ದೇವೇಗೌಡರಿಂದ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು ಈಗ ಬೃಹತ್ತಾಗಿ ಬೆಳೆದಿದೆ ಎಂದ ಹೆಚ್‌ಡಿಡಿ
 

First Published May 6, 2023, 6:43 PM IST | Last Updated May 6, 2023, 6:43 PM IST

ಬೆಂಗಳೂರು: ಜೆಡಿಎಸ್‌ ಪಕ್ಷವು ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಂಗಳೂರು ಬೃಹತ್‌ ನಗರವಾಗಿ ಬೆಳೆದಿದೆ. ಇಲ್ಲಿ ಈಗ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನಾನು ಸಿಎಂ ಆಗಿದ್ದ ಕಾಲಕ್ಕೂ ಈಗ ಸಾಕಷ್ಟು ಬದಲಾವಣೆ ಆಗಿದೆ. ಕುಮಾರಸ್ವಾಮಿ ಉಪನಗರ ನಿರ್ಮಾಣಕ್ಕೆ ಸಿದ್ಧರಾಗಿದ್ರು, ಆದ್ರೆ ಯಾರೂ ಅದಕ್ಕೆ ಅವಕಾಶ ಕೊಡಲಿಲ್ಲ. ಎಲ್ಲಾವನ್ನು ಪರಿಶೀಲನೆ ಮಾಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದೀವಿ. ಯಾವುದೇ ವ್ಯಕ್ತಿಗೆ ಅಸಡ್ಡೆ ತೋರಿಲ್ಲ ಎಂದು ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಹೇಳಿದ್ದಾರೆ.