Asianet Suvarna News Asianet Suvarna News

News Hour: ಜೈನ ಮುನಿ ಹತ್ಯೆ, ಬಿಜೆಪಿ-ಕಾಂಗ್ರೆಸ್‌ ರಾಜಕೀಯ!

ಜೈನ ಮುನಿ ಹತ್ಯೆ ವಿಚಾರ ಇಂದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ ನಾಯಕರು ಸಿಬಿಐ ತನಿಖೆಗೆ ಆಗ್ರಹಿಸಿದ್ದರೆ, ಕಾಂಗ್ರೆಸ್‌ ಪ್ರಕರಣದ ಕುರಿತಾಗಿ ಸಾಕ್ಷ್ಯ ನೀಡಿ ಎಂದು ಹೇಳುತ್ತಿದೆ.
 

ಬೆಂಗಳೂರು (ಜು.10): ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆಯ ವಿಚಾರ ಬಿಜೆಪಿ-ಕಾಂಗ್ರೆಸ್‌ ರಾಜಕೀಯಕ್ಕೆ ಕಾರಣವಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದ್ದರೆ, ಇನ್ನೊಂದೆಡೆ ಸಚಿನ ಪ್ರಿಯಾಂಕ್‌ ಖರ್ಗೆ ಸಾಕ್ಷ್ಯವಿದ್ದರೆ ನೀಡಿ ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಿಕ್ಕೋಡಿಯಲ್ಲಿ ಜೈನ ಮುನಿ ಹತ್ಯೆಯ ವಿಚಾರ ಬಿಜೆಪಿ-ಕಾಂಗ್ರೆಸ್‌ ರಾಜಕೀಯಕ್ಕೆ ಕಾರಣವಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಿಸಿದ್ದರೆ, ಇನ್ನೊಂದೆಡೆ ಸಚಿನ ಪ್ರಿಯಾಂಕ್‌ ಖರ್ಗೆ ಸಾಕ್ಷ್ಯವಿದ್ದರೆ ನೀಡಿ ಸಮಗ್ರ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

'ಓರ್ವ ಸಾಧುವನ್ನು ಈ ರೀತಿ ಹತ್ಯೆ ಮಾಡಿದರೆ ಇನ್ನು ಸಾಮಾನ್ಯರ ಪಾಡೇನು? -ಪೇಜಾವರಶ್ರೀ

ರಾಜ್ಯ ವಿಧಾನಸಭೆ ಅಧಿವೇಶನದ ಒಳಗೂ ಜೈನ ಮುನಿ ಹತ್ಯೆಯ ವಿಚಾರ ಪ್ರತಿಧ್ವನಿಸಿತು. ತೇರದಾಳ ಶಾಸಕ ಸಿದ್ದು ಸವದಿ, ಅಭಯ್‌ ಪಾಟೀಲ್‌, ಸುನೀಲ್‌ ಕುಮಾರ್‌ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದಾರೆ.

Video Top Stories