ಉಪಚುನಾವಣೆ: ಗೆಲುವಿಗೆ ಅಪ್ಪನ ಹೆಸರೇ ಸಾಕು, ತಂದೆಗೆ ಸಂಕಷ್ಟ ತಂದಿಟ್ಟ ಪುತ್ರ
ಸಂಸದ ಬಿ.ಎನ್.ಬಚ್ಚೇಗೌಡ ಕೂಡ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ಗೆ ಬೆಂಬಲಸುವುದು ಬಿಟ್ಟು ನಾಪತ್ತೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಮಧ್ಯೆ ಉಚ್ಚಾಟಿಸಿದಕ್ಕೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಮೊದಲು ಪ್ರತಿಕ್ರಿಯೆ ನೀಡಿದ್ದು, ಗೆಲ್ಲಲು ತಂದೆ ಹೆಸರೇ ಸಾಕು ಎಂದು ಹೇಳುವ ಮೂಲಕ ಸಂಸದ ಬಚ್ಚೇಗೌಡಗೆ ಸಂಕಷ್ಟ ತಂದಿಟ್ಟಿದ್ದಾರೆ.
ಬೆಂಗಳೂರು, (ನ.22): ಹೊಸಕೋಟೆ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ತಮ್ಮ ವಿರೋಧಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಂಸದ ಬಿಎನ್ ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಅವರನ್ನು ಬಿಜೆಪಿ ಉಚ್ಚಾಟಿಸಿದೆ.
ಅಷ್ಟೇ ಅಲ್ಲದೇ ಸಂಸದ ಬಿ.ಎನ್.ಬಚ್ಚೇಗೌಡ ಕೂಡ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ಗೆ ಬೆಂಬಲಸುವುದು ಬಿಟ್ಟು ನಾಪತ್ತೆಯಾಗಿದ್ದು, ರಾಜ್ಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದರ ಮಧ್ಯೆ ಉಚ್ಚಾಟಿಸಿದಕ್ಕೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರು ಮೊದಲು ಪ್ರತಿಕ್ರಿಯೆ ನೀಡಿದ್ದು, ಗೆಲ್ಲಲು ತಂದೆ ಹೆಸರೇ ಸಾಕು ಎಂದು ಹೇಳುವ ಮೂಲಕ ಸಂಸದ ಬಚ್ಚೇಗೌಡಗೆ ಸಂಕಷ್ಟ ತಂದಿಟ್ಟಿದ್ದಾರೆ. ಹಾಗಾದ್ರೆ ಶರತ್ ಏನೆಲ್ಲ ಮಾತನಾಡಿದ್ದಾರೆ ಎನ್ನುವುದು ಅವರ ಬಾಯಿಂದಲೇ ಕೇಳಿ.