ಸಿದ್ದರಾಮಯ್ಯ ಮಡಿಕೇರಿ ಭೇಟಿಗೆ ಭಾರಿ ವಿರೋಧ, ಹೇಡಿಗಳಿಂದ ಮೊಟ್ಟ ಎಸೆತ ಎಂದ ಕಾಂಗ್ರೆಸ್!
ಸರ್ಕಾರ ಯಾವುದೇ ಪರವಾಗರಿಬಾರದು. ಮೊಟ್ಟೆ ಎಸೆತ ಹೇಡಿಗಳ ಕೆಲಸವಾಗಿದೆ. ಸರ್ಕಾರ ನಡೆಸಲು ಬರದ ಬಿಜೆಪಿಯಿಂದ ಇದಕ್ಕಿಂತ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಮಡಿಕೇರಿ(ಆ.18): ಸಿದ್ದರಾಮಯ್ಯ ಮಡಿಕೇರಿ ಭೇಟಿ ಭಾರಿ ವಿವಾದಕ್ಕೆ ಕಾರಣಾಗಿದೆ. ಸಿದ್ದರಾಮಯ್ಯ ಮಡಿಕೇರಿಯಲ್ಲಿ ಹೋದ ಕಡೆಯಲ್ಲಲೆಲ್ಲಾ ಪ್ರತಿಭಟನೆ ಬಿಸಿ ಎದುರಾಗಿದೆ. ಬಿಜೆಪಿ ಕಾರ್ಯಕರ್ತರು. ಹಿಂದೂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕಿದ್ದಾರೆ. ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಸಿದ್ದು ತೆರಳಿದ್ದಾರೆ. ಇದರ ನಡುವೆ ಮೊಟ್ಟೆ ಎಸೆತ ಪ್ರಕರಣವೂ ನಡೆದಿದೆ. ಇದರಿಂದ ಸಿದ್ದು ಆಕ್ರೋಶಗೊಂಡಿದ್ದಾರೆ. ಬಿಜೆಪಿಗೆ ಸರ್ಕಾರ ನಡೆಸಲು ಬರುವುದಿಲ್ಲ. ಸರ್ಕಾರ ಯಾವುದೇ ಒಂದು ಸಮುದಾಯದ ಪರ ಇರಬಾರದು. ಮೊಟ್ಟೆ ಎಸೆತ ಹೇಡಿಗಳ ಕೆಲಸ ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ.