ನಮ್ಮನ್ನೂ ಮಿನಿಸ್ಟರ್ ಮಾಡಿ,ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದ ಬೇಳೂರು!
ರಮೇಶ್ ಜಾರಕಿಹೊಳಿ ಮನೆ ಮುಂದೆ ಕಾಂಗ್ರೆಸ್ ಪೋಸ್ಟರ್ ಸಮರ, ಮುಖ್ಯಮಂತ್ರಿ ಪಟ್ಟಕ್ಕೆ ಡಿಕೆಶಿ, ಸಿದ್ದು ಬಣದ ಬಡಿದಾಟ, ಮರಾಠ ಮೀಸಲಾತಿ ಕಿಚ್ಚು, ಮಹಾರಾಷ್ಟ್ರದಲ್ಲಿ ಹಿಂಸಾಚಾರ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
20-20 ತಿಂಗಳು ಅಧಿಕಾರ ಹಂಚಿಕೆ ಮಾಡಿ. ಮಂತ್ರಿಗಳ ಮಕ್ಕಳನ್ನೇ ಮಿನಿಸ್ಟರ್ ಮಾಡಿದರೆ, ನಾವು ಮಿನಿಸ್ಟರ್ ಆಗೋದು ಯಾವಾಗ ಎಂದು ಕಾಂಗ್ರಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆಕ್ರೋಶ ಹೊರಹಾಕಿದ್ದಾರೆ. ಬೇಳೂರು ನೇರವಾಗಿ ಸಚಿವ ಮಧುಬಂಗಾರಪ್ಪ ಹೆಸರು ಉಲ್ಲೇಖಿಸಿ ಆರೋಪಿಸಿದ್ದಾರೆ. ನಮಗೆ ಅರ್ಹತೆ ಇಲ್ಲವೇ, ಮೂರು ಬಾರಿ ಶಾಸಕನಾಗಿದ್ದೇನೆ ಎಂದು ಬೇಳೂರು ಹೇಳಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ನಲ್ಲಿ ಬಣ ಬಡಿದಾಡ ಜೋರಾಗುತ್ತಿದೆ. ಸಿದ್ದರಾಮಯ್ಯ ಮುಂದಿನ 5 ವರ್ಷ ಸಿಎಂ ಎಂದು ಕೆಲ ದಿನಗಳಿಂದ ಬೆಂಬಲಿಗರು ಹೇಳಿಕೆ ನೀಡುತ್ತಲೇ ಇದ್ದಾದರೆ. ಇದೀಗ ಜಮೀರ್ ಅಹಮ್ಮದ್ ಹೇಳಿಕೆ ನೀಡಿದ ಬಣ ಬಡಿದಾಟ ಹೆಚ್ಚಿಸಿದ್ದಾರೆ. ಇತ್ತಎರಡೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್ ಬಣ ಮುಖ್ಯಮಂತ್ರಿ ಅನ್ನೋ ವಾದವೂ ಜೋರಾಗುತ್ತಿದೆ.