Asianet Suvarna News Asianet Suvarna News

ರೈಲಿನಲ್ಲೇ ಮೈಸೂರಿಗೆ ಬಂದಿಳಿದ ಡಿಕೆಶಿ! ನಾಯಕನ ದರ್ಶನಕ್ಕೆ ಅಭಿಮಾನಿ ಸಾಗರ

ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹೊರಬಂದಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ದೇವಸ್ಥಾನಗಳ ಭೇಟಿಯನ್ನು ಮುಂದುವರಿಸಿದ್ದಾರೆ. ಸಾವಿರಾರು ಕೋಟಿಗಳ ಒಡೆಯ ಡಿಕೆಶಿ ಸಾಮಾನ್ಯ ರೈಲಿನಲ್ಲಿ ಮೈಸೂರಿಗೆ ಪ್ರಯಾಣಿಸಿ ಬೆಂಬಲಿಗರಿಗೆ ಅಚ್ಚರಿ ನೀಡಿದರು. ಬೆಂಬಲಿಗರು ಅವರಿಗೆ ಭವ್ಯ ಸ್ವಾಗತವನ್ನೂ ನೀಡಿದರು.

 

ಮೈಸೂರು (ನ.07): ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹೊರಬಂದಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ದೇವಸ್ಥಾನಗಳ ಭೇಟಿಯನ್ನು ಮುಂದುವರಿಸಿದ್ದಾರೆ. ಸಾವಿರಾರು ಕೋಟಿಗಳ ಒಡೆಯ ಡಿಕೆಶಿ ಸಾಮಾನ್ಯ ರೈಲಿನಲ್ಲಿ ಮೈಸೂರಿಗೆ ಪ್ರಯಾಣಿಸಿ ಬೆಂಬಲಿಗರಿಗೆ ಅಚ್ಚರಿ ನೀಡಿದರು. ಬೆಂಬಲಿಗರು ಅವರಿಗೆ ಭವ್ಯ ಸ್ವಾಗತವನ್ನೂ ನೀಡಿದರು.

ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸಿದಂತೆ 48 ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದ ಡಿಕೆಶಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ರಾಜ್ಯಕ್ಕೆ ಮರಳಿದ ಡಿಕೆಶಿಗೆ ಕಳೆದ ವಾರ ಅನಾರೋಗ್ಯ ಕಾಡಿತ್ತು. ಈಗ ಮತ್ತೆ ದೇವಸ್ಥಾನಗಳ ಭೇಟಿಯನ್ನು ಮುಂದುವರೆಸಿದ್ದಾರೆ.