Asianet Suvarna News Asianet Suvarna News

Karnataka Politics-ಜ್ವಾಲಾಮುಖಿಯಂತೆ ಸ್ಫೋಟಿಸ್ತಾ 'ಕೈ' ಕೋಟೆಯ ಅಂತರ್ಯುದ್ಧ

ಒಂದ್ಕಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಮತ್ತೊಂದ್ಕಡೆ ಸಿದ್ದು ಸೈನ್ಯ, ಮಗದೊಂದ್ ಕಡೆ ಸೀನಿಯರ್ ಲೀಡರ್'ಗಳು. ಹೀಗೆ ಎಲ್ಲರ ಬುಡದಲ್ಲಿ  ಡಿಕೆ ಡೈನಾಮೈಟ್ ಸ್ಫೋಟಿಸಿದೆ. ಕಾಂಗ್ರೆಸ್ ಪಾಳೆಯದಲ್ಲೀಗ ಡಿಕೆ ಡೈನಾಮೈಟ್'ನದ್ದೇ ಸದ್ದು.

ಒಂದ್ಕಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ. ಮತ್ತೊಂದ್ಕಡೆ ಸಿದ್ದು ಸೈನ್ಯ, ಮಗದೊಂದ್ ಕಡೆ ಸೀನಿಯರ್ ಲೀಡರ್'ಗಳು. ಹೀಗೆ ಎಲ್ಲರ ಬುಡದಲ್ಲಿ  ಡಿಕೆ ಡೈನಾಮೈಟ್ ಸ್ಫೋಟಿಸಿದೆ. ಕಾಂಗ್ರೆಸ್ ಪಾಳೆಯದಲ್ಲೀಗ ಡಿಕೆ ಡೈನಾಮೈಟ್'ನದ್ದೇ ಸದ್ದು. ಸಿದ್ದುಗೊಂದು ಡೈನಾಮೈಟ್, ಸಿದ್ದು ಸೈನ್ಯಕ್ಕೊಂದು ಡೈನಾಮೈಟ್  ತಮ್ಮದೇ ಸ್ವಂತ ಸೈನಿಕರ ಬುಡಕ್ಕೂ ಡೈನಾಮೈಟ್ ಕೊನೆಗೆ ಸಿದ್ದರಾಮೋತ್ಸವವನ್ನೂ ಬಿಡದೆ ಡೈನಾಮೈಟ್ ಇಟ್ಟಿದ್ದಾರೆ ಕನಕಪುರ ಬಂಡೆ ಡಿಕೆಡಿಕೆ ಶಿವಕುಮಾರ್.

ವಿಧಾನಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ, ಕಾಂಗ್ರೆಸ್ ಕೋಟೆಯೊಳಗೆ ಡೈನಾಮೈಟ್ ಸ್ಫೋಟಿಸಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್. ಇದು ಮುಂದಿನ ಕೆಲ ತಿಂಗಳುಗಳಲ್ಲಿ ಕೈ ಸಾಮ್ರಾಜ್ಯದಲ್ಲಿ ಧಗಧಗಿಸಲಿದೆ ಅಂತ ಹೇಳಲಾಗ್ತಿರೋ ಜ್ವಾಲಾಮುಖಿಯ ಸೂಚನೆನಾ..? ಅಷ್ಟಕ್ಕೂ ಆ ಜ್ವಾಲಾಮುಖಿ ಯಾವುದು..? ಡಿಕೆ ಡೈನಾಮೈಟ್ ಮೂಲಕ ಅದ್ರ ಸ್ಪಷ್ಟ ಸುಳಿವು ಸಿಕ್ಕಿ ಬಿಡ್ತಾ..? 

ಮುಂದಿನ ಮಹಾಯುದ್ಧದ ಟ್ರೈಲರನ್ನು ಡೈನಾಮೈಟ್ ಮೂಲಕ ಡಿಕೆಶಿ ಕೊಟ್ಟು ಬಿಟ್ರಾ..? ಕನಕಪುರ ಬಂಡೆ ಚೆಕ್'ಮೇಟ್ ಇಟ್ಟದ್ದು ಯಾರಿಗೆ..? ಈ ಡೈನಾಮೈಟ್-ಚೆಕ್'ಮೇಟ್'ನ ಪರಿಣಾಮ ಏನಾಗಿರಲಿದೆ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ. 

Video Top Stories