ಬಿಜೆಪಿ ಟಿಕೆಟ್ ಕ್ಯಾನ್ಸಲ್, ರೋಷನ್ ಬೇಗ್ ಹೊಸ ಕಮಾಲ್..!
ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದೆ. ಆದ್ರೆ, ಆಕಡೆಯೂ ಇಲ್ಲ ಈಕಡೆಯೂ ಇಲ್ಲ ಎನ್ನುವಂತಾಗಿರುವ ರೋಷನ್ ಬೇಗ್ ನಡೆ ಮಾತ್ರ ಇನ್ನೂ ನಿಗೂಢವಾಗಿದೆ. ಕಾಂಗ್ರೆಸ್-ಬಿಜೆಪಿಗೆ ಬೇಡವಾಗಿ ಅನಾಥವಾಗಿರುವ ರೋಷನ್ ಬೇಗ್ ಕೊನೆ ಕ್ಷಣದಲ್ಲಿ ಹೊಸ ದಾಳ ಉರುಳಿಸಲು 3ನೇ ಮನೆಗೆ ಕಾಲಿಟ್ಟಿದ್ದಾರೆ.
ಬೆಂಗಳೂರು, (ನ.16): ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಹತ್ತಿರವಾಗುತ್ತಿದೆ. ಆದ್ರೆ, ಆಕಡೆಯೂ ಇಲ್ಲ ಈಕಡೆಯೂ ಇಲ್ಲ ಎನ್ನುವಂತಾಗಿರುವ ರೋಷನ್ ಬೇಗ್ ನಡೆ ಮಾತ್ರ ಇನ್ನೂ ನಿಗೂಢವಾಗಿದೆ.
ಒಂದು ಕಡೆ ಕಾಂಗ್ರೆಸ್ನಿಂದ ಬೇಡವಾಗಿರುವ ಬೇಗ್ಗೆ ಬಿಜೆಪಿಯೂ ಸಹ ಶಿವಾಜಿನಗರದ ಟಿಕೆಟ್ ನೀಡಿಲ್ಲ. ಇಬ್ಬರಿಗೂ ಬೇಡವಾಗಿ ಅನಾಥವಾಗಿರುವ ರೋಷನ್ ಬೇಗ್ ಕೊನೆ ಕ್ಷಣದಲ್ಲಿ ಹೊಸ ದಾಳ ಉರುಳಿಸಲು 3ನೇ ಮನೆಗೆ ಕಾಲಿಟ್ಟಿದ್ದಾರೆ. ಹಾಗಾದ್ರೆ ಬೇಗ್ ಹೊಸ ದಾಳವಾದ್ರೂ ಏನು..? 3ನೇ ಮನೆ ಯಾವುದು..? ವಿಡಿಯೋನಲ್ಲಿ ನೋಡಿ....
ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.