Asianet Suvarna News Asianet Suvarna News

ಆನಂದ್ ಸಿಂಗ್ ಎಲ್ಲಾ ಖಾತೆಗೂ ಸಮರ್ಥ, ಸರ್ಟಿಫಿಕೇಟ್ ಕೊಟ್ಟ ಕೈ ನಾಯಕ

* ಸಚಿವ ಆನಂದ್ ಸಿಂಗ್ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಮುಖಂಡ
* ಆನಂದ್ ಸಿಂಗ್ ಸಮರ್ಥ ವ್ಯಕ್ತಿ, ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತಾರೆ
* ಆನಂದ್ ಸಿಂಗ್ ರಾಜೀನಾಮೆ ನೀಡಲು ಮುಂದಾಗಿದ್ದರು ಎಂದು ಸುದ್ದಿಯಾಗಿತ್ತು 

ವಿಜಯನಗರ( ಆ. 12)  ಸಚಿವ ಆನಂದ್ ಸಿಂಗ್ ಪರ ಕೈ ನಾಯಕರು ಬ್ಯಾಟಿಂಗ್ ನಡೆಸಿದ್ದಾರೆ ಹೊಸಪೇಯಲ್ಲಿ ಮಾಜಿ ಸಚಿವ ಸಂತೋಷ್ ಲಾಡ್ ಅಚ್ಚರಿ ಹೇಳಿಕೆ ನೀಡಿದ್ದಾರೆ. 'ಯಾವುದೇ ಖಾತೆ ಕೊಟ್ಟರು ನಿಭಾಯಿಸುವ ಶಕ್ತಿ ಆನಂದ್ ಸಿಂಗ್‌ಗೆ ಇದೆ'  'ಆನಂದ್ ಸಿಂಗ್ ಒಬ್ಬ ಸಮರ್ಥ ವ್ಯಕ್ತಿ, ದೊಡ್ಡ ಖಾತೆ ಕೇಳೊದರಲ್ಲಿ ತಪ್ಪೇನಿಲ್ಲ ಎಂದು ಬ್ಯಾಟ್ ಬೀಸಿದ್ದಾರೆ.

ಬೊಮ್ಮಾಯಿ ಭೇಟಿ ನಂತರ ಬದಲಾದ ಆನಂದ

ಕೋವಿಡ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಭಾಗಿಯಾದ ಸಂತೋಷ್ ಲಾಡ್  ಆನಂದ್ ಸಿಂಗ್ ಪರ ಮಾತನಾಡಿದರು.  ಕೊಟ್ಟ  ಖಾತೆ ಸರಿ ಇಲ್ಲ ಎಂದು ಸಚಿವ ಆನಂದ್ ಸಿಂಗ್ ಕ್ಯಾತೆ ತೆಗೆದಿದ್ದರು. ಒಂದು ಹಂತದಲ್ಲಿ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ  ಎಂದು ಹೇಳಲಾಗಿತ್ತು.