Asianet Suvarna News Asianet Suvarna News

ದಳಪತಿ ಸ್ಥಾನಕ್ಕೆ ರೇಸ್‌ನಲ್ಲಿ ತ್ರಿಮೂರ್ತಿಗಳು! ತೆನೆಯ ಹೊರೆ ಯಾರ ತಲೆಗೆ?

ಜೆಡಿಎಸ್ ಹೊಸ ರಾಜ್ಯಾಧ್ಯಕ್ಷರ ನೇಮಕ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದ್ದು, ಹೊಸ ದಳಪತಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕುತೂಹಲ ಹುಟ್ಟು ಹಾಕಿದೆ. ಮೂವರು ಈ ಹುದ್ದೆಯ ರೇಸ್‌ನಲ್ಲಿದ್ದು, ಜೆಡಿಎಸ್ ವರಿಷ್ಠರು ಯಾರ ಮೇಲೆ ಕೃಪೆ ತೋರಲಿದ್ದಾರೆ ಎಂಬುವುದು ಕಾದು ನೊಡಬೇಕಾಗಿದೆ.

ಬೆಂಗಳೂರು (ಜೂ.25): ಎಚ್. ವಿಶ್ವನಾಥ್ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ, ಜೆಡಿಎಸ್ ಕೊನೆಗೂ ಹೊಸ ರಾಜ್ಯಾಧ್ಯಕ್ಷರ ನೇಮಕಕ್ಕೆ ನಿರ್ಧರಿಸಿದೆ. ಈ ವಿಚಾರವನ್ನು ಕಳೆದ ಸೋಮವಾರ ಖುದ್ದು ಪಕ್ಷದ ವರಿಷ್ಠ  ಎಚ್.ಡಿ. ದೇವೇಗೌಡ ಬಹಿರಂಗಪಡಿಸಿದ್ದಾರೆ.

ಜೆಡಿಎಸ್ ಹೊಸ ರಾಜ್ಯಾಧ್ಯಕ್ಷರ ನೇಮಕ ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟುಹಾಕಿದ್ದು, ಹೊಸ ದಳಪತಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಕುತೂಹಲ ಹುಟ್ಟು ಹಾಕಿದೆ. ಮೂವರು ಈ ಹುದ್ದೆಯ ರೇಸ್‌ನಲ್ಲಿದ್ದು, ಜೆಡಿಎಸ್ ವರಿಷ್ಠರು ಯಾರ ಮೇಲೆ ಕೃಪೆ ತೋರಲಿದ್ದಾರೆ ಎಂಬುವುದು ಕಾದು ನೊಡಬೇಕಾಗಿದೆ.

ದೇವೇಗೌಡರು ಈ ಬಾರಿಯೂ ಅಹಿಂದ ನಾಯಕರಿಗೆ ಮಣೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯಾಧ್ಯಕ್ಷ ಹುದ್ದೆಗೆ ಮೂವರು ಈಗಾಗಲೇ ರೇಸ್‌ನಲ್ಲಿದ್ದಾರೆ. ಹಾಗಾದ್ರೆ ಯಾರಾಗ್ತಾರೆ ರಾಜ್ಯದ ದಳಪತಿ? 

Video Top Stories