Asianet Suvarna News Asianet Suvarna News

ಮೊಮ್ಮಗನ ಹೇಳಿಕೆಗೆ ತೇಪೆ ಹಚ್ಚಿದ ತಾತ: ಹಾಗಿದ್ರೆ ವಿಡಿಯೋ ಸುಳ್ಳಾ..?

ದೇವೇಗೌಡ ಅವರು ಮೊಮ್ಮಗನ ಹೇಳಿಕೆಗೆ ತೇಪೆ ಹಚ್ಚಿದ್ದಾರೆ. ಹಾಗಾದ್ರೆ ಮೊಮ್ಮಗನ ಹೇಳಿಕೆ ತಾತ ಏನು ಹೇಳಿದರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.

ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ ಎಂದು ನಿಖಿಲ್ ಕುಮಾರಸ್ವಾಮಿ ಕರೆ ಕೊಟ್ಟಿರೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾವಾಗ ಬೇಕಾದರೂ ಮಧ್ಯಂತರ ಚುನಾವಣೆ ಬರಹುದು. ಅದಕ್ಕಾಗಿ ತಯಾರಾಗಿರಬೇಕೆಂದು ಹೇಳಿದ್ದರು ಎಂದು ನಿಖಿಲ್ ಇತ್ತೀಚೆಗೆ ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರ ಜತೆ ಮಾತನಾಡುವ ವೇಳೆ ಹೇಳಿದ್ದರು. ಅದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅಷ್ಟೇ ಅಲ್ಲದೇ ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಇದೀಗ ಸ್ವತಃ ದೇವೇಗೌಡರೇ ಪ್ರತಿಕ್ರಿಯಿಸಿದ್ದು,  ಮೊಮ್ಮಗನ ಹೇಳಿಕೆಗೆ ತೇಪೆ ಹಚ್ಚಿದ್ದಾರೆ. ಹಾಗಾದ್ರೆ ಮೊಮ್ಮಗನ ಹೇಳಿಕೆ ತಾತ ಏನು ಹೇಳಿದರು ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.