ಅಯ್ಯೋ ಶಿವನೇ..: ವಿಶ್ವಾಸಮತ ತಪ್ಪಿಸಲು ಕಾಂಗ್ರೆಸ್ ಮಹಾ ಯೋಜನೆ!
ನಾಳಿನ(ಜು.22) ವಿಶ್ವಾಸಮತ ಯಾಚನೆ ಮುಂದೂಡಲು ಕಾಂಗ್ರೆಸ್ ಭರ್ಜರಿ ಯೋಜನೆ ರೂಪಿಸಿದೆ. ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕರಿಸುವಂತೆ ಕಾಂಗ್ರೆಸ್’ಗೆ ಸ್ಪೀಕರ್’ಗೆ ಮನವಿ ಮಾಡುವ ಇರಾದೆಯಲ್ಲಿದೆ.
ಬೆಂಗಳೂರು(ಜು.21): ನಾಳಿನ(ಜು.22) ವಿಶ್ವಾಸಮತ ಯಾಚನೆ ಮುಂದೂಡಲು ಕಾಂಗ್ರೆಸ್ ಭರ್ಜರಿ ಯೋಜನೆ ರೂಪಿಸಿದೆ. ರಾಜ್ಯಪಾಲರು ಈ ಹಿಂದೆ ಕುದುರೆ ವ್ಯಾಪಾರದ ಅನುಮಾನ ವ್ಯಕ್ತಪಡಿಸಿದ್ದನ್ನೇ ನೆಪ ಮಾಡಿ, ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕರಿಸುವಂತೆ ಸ್ಪೀಕರ್’ಗೆ ಮನವಿ ಮಾಡುವ ಇರಾದೆಯಲ್ಲಿದೆ. ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕೃತಗೊಂಡರೆ, ಸುಪ್ರೀಂಕೋರ್ಟ್ ಗಮನಕ್ಕೆ ತಂದು ನಂತರ ಶಾಸಕರಿಗೆ ವಿಪ್ ಜಾರಿಗೊಳಿಸುವ ಯೋಜನೆಯನ್ನು ಕಾಂಗ್ರೆಸ್ ಹಾಕಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...