ಹಿರಿಯೂರು ಒಕ್ಕಲಿಗ ಸಮಾವೇಶದಲ್ಲಿ ಹೈಡ್ರಾಮಾ: ಡಿಕೆಶಿ- ಎಚ್ಡಿಕೆ ಬೆಂಬಲಿಗರ ಜೈಕಾರ ಫೈಟ್
ಹಿರಿಯೂರು ತಾಲೂಕು ಒಕ್ಕಲಿಗರ ಸಮಾವೇಶದಲ್ಲಿ ಎಚ್ಡಿಕೆ - ಡಿಕೆಶಿ ಅಭಿಮಾನಿಗಳ ನಡುವೆ ಹೈಡ್ರಾಮಾ ನಡೆದಿದೆ. ಎಚ್ಡಿಕೆ ಪರ ಘೋಷಣೆ ಕೂಗಿದ್ದಕ್ಕೆ ಡಿಕೆಶಿ ಅಭಿಮಾನಿಗಳು ಅವರ ಮೈಕನ್ನೇ ಕಿತ್ತುಕೊಂಡಿದ್ದಾರೆ.
ಒಕ್ಕಲಿಗರ ಸಮಾವೇಶದಲ್ಲಿ ಹೈಡ್ರಾಮಾ ನಡೆದಿದ್ದು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಅವರ ಬೆಂಬಲಿಗರ ನಡುವೆ ಜೈಕಾರದ ಫೈಟ್ ನಡೆದಿದೆ. ಕುಮಾರಸ್ವಾಮಿ ಪರ ಜೈಕಾರ ಹಾಕಿದ್ದಕ್ಕೆ ಡಿಕೆಶಿ ಬೆಂಬಲಿಗರು ಕಿಡಿ ಕಾರಿದ್ದು, ವೇದಿಕೆಗೆ ನುಗ್ಗಿದ ಡಿಕೆಶಿ ಅಭಿಮಾನಿಗಳು ಕುಮಾರಸ್ವಾಮಿ ಪರ ಜೈಕಾರ ಹಾಕಿದ್ದಕ್ಕೆ ಮೈಕ್ ಅನ್ನು ಕಿತ್ತುಕೊಂಡಿದ್ದಾರೆ. ಆದರೆ, ಅಭಿಮಾನಿಗಳ ಜಯಘೋಷಕ್ಕೆ ಮಾಜಿ ಸಿಎಂ ಕುಮಾರಸ್ವಾಮಿಯಾಗಲೀ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಆಗಲೀ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನಲ್ಲಿ ನಡೆದ ಒಕ್ಕಲಿಗರ ಸಮಾವೇಶದಲ್ಲಿ ಈ ಹೈಡ್ರಾಮಾ ನಡೆದಿದೆ.