Asianet Suvarna News Asianet Suvarna News

ಕಾರವಾರ: ಗದ್ದೆಗಿಳಿದು ನಾಟಿ ಮಾಡಿದ ಡಿ.ಸಿ, ಪತ್ರಕರ್ತರು ಸಾಥ್

- ಕೃಷಿಯತ್ತ ಯುವಕರನ್ನು ಪ್ರೇರೇಪಿಸುವ ದೃಷ್ಠಿಯಿಂದ  ಗದ್ದೆ ನಾಟಿ ಕಾರ್ಯಕ್ರಮ

- ಪತ್ರಿಕಾ ದಿನಾಚರಣೆ ಅಂಗವಾಗಿ ಕಾರವಾರ ಜಿಲ್ಲಾ ಪತ್ರಕರ್ತರಿಂದ ವಿಶಿಷ್ಟ ಕಾರ್ಯಕ್ರಮ 

- ಪಂಚೆ- ಶಲ್ಯವನ್ನುಟ್ಟು ಗದ್ದೆ ನಾಟಿ ಮಾಡಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ 

ಕಾರವಾರ (ಆ. 08): ಪತ್ರಿಕಾ ದಿನಾಚರಣೆ ಅಂಗವಾಗಿ ಕಾರವಾರ ಜಿಲ್ಲಾ ಪತ್ರಕರ್ತರು ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕೃಷಿಯತ್ತ ಯುವಕರನ್ನು ಪ್ರೇರೇಪಿಸುವ ದೃಷ್ಟಿಯಿಂದ  ಗದ್ದೆ ನಾಟಿ ಮಾಡಿ ಗಮನ ಸೆಳೆದರು.  

ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇವರಿಗೆ ಸಾಥ್ ನೀಡಿದ್ದು, ಗದ್ದೆಗಿಳಿದು ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ  ಟ್ಯಾಗೋರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಿತು. 
 

Video Top Stories