ರೋಗಿಗಳನ್ನು ಬೀದಿಗೆ ತಳ್ಳಿದ ಖಾಸಗಿ ಆಸ್ಪತ್ರೆ..!
ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಚಿಕಿತ್ಸೆ ನೀಡದೇ ಮಾರ್ಕೆಟ್ ಬಳಿ ತಂದು ಬಿಟ್ಟಿದ್ದಾರೆ. ಈಗ ಕೆಲವು ರೋಗಿಗಳು ಮಾರುಕಟ್ಟೆಯ ಜಗುಲಿಯಲ್ಲಿ ವಾಸ ಮಾಡುತ್ತಿದ್ದಾರೆ. ರಿಕ್ಷಾ ಚಾಲಕರು ಹಾಗೂ ಮಾರುಕಟ್ಟೆಯ ವ್ಯಾಪಾರಿಗಳು ಇವರಿಗೆಲ್ಲಾ ಊಟದ ವ್ಯವಸ್ಥೆ ಮಾಡಿದ್ದಾರೆ.
ಮಂಗಳೂರು(ಜೂ.19): ದಕ್ಷಿಣಕನ್ನಡ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ರೋಗಿಗಳು ಬೀದಿಪಾಲಾಗಿದ್ದಾರೆ. ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಅಮಾನವೀಯತೆ ಇದೀಗ ಬಯಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ಚಿಕಿತ್ಸೆ ನೀಡದೆ ಮಾರ್ಕೆಟ್ ಬಳಿ ತಂದು ಬಿಟ್ಟಿದ್ದಾರೆ. ಈಗ ಕೆಲವು ರೋಗಿಗಳು ಮಾರುಕಟ್ಟೆಯ ಜಗುಲಿಯಲ್ಲಿ ವಾಸ ಮಾಡುತ್ತಿದ್ದಾರೆ. ರಿಕ್ಷಾ ಚಾಲಕರು ಹಾಗೂ ಮಾರುಕಟ್ಟೆಯ ವ್ಯಾಪಾರಿಗಳು ಇವರಿಗೆಲ್ಲಾ ಊಟದ ವ್ಯವಸ್ಥೆ ಮಾಡಿದ್ದಾರೆ.
ದಾವಣಗೆರೆ ರಾಜನಹಳ್ಳಿಯ ಗರ್ಭಿಣಿಗೆ ಪಾಸಿಟಿವ್: ಜನರಲ್ಲಿ ಆತಂಕ
ಸೂಕ್ತ ವ್ಯವಸ್ಥೆ ಕಲ್ಪಿಸದೇ ವೃದ್ದರನ್ನು ಏಕಾಏಕಿ ಬೀದಿಗೆ ತಂದು ಹಾಕಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.