Asianet Suvarna News Asianet Suvarna News

ಸೂರ್ಯಗ್ರಹಣ: ಕಲಬುರಗಿ ಗಾಣಗಾಪುರ ದತ್ತಾತ್ರೇಯದಲ್ಲಿ ವಿಶೇಷ ಪೂಜೆ

ರಾಹುಗ್ರಸ್ತ ಸೂರ್ಯಗ್ರಹಣ| ಕಲಬುರಗಿ ಜಿಲ್ಲೆಯ ಗಾಣಗಪುರದ ಸುಪ್ರಸಿದ್ಧ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಬಂದ್‌|  ಸೋಮವಾರದವರೆಗೂ ದೇಗುಲ ಬಂದ್‌| ಸೂರ್ಯಗ್ರಹಣದ ಬಳಿಕ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ|

ಕಲಬುರಗಿ(ಜೂ.20): ರಾಹುಗ್ರಸ್ತ ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ನಾಳೆ(ಭಾನುವಾರ) ಜಿಲ್ಲೆಯ ಗಾಣಗಪುರದ  ಸುಪ್ರಸಿದ್ಧ ದತ್ತಾತ್ರೇಯ ಸ್ವಾಮಿ ದೇವಸ್ಥಾನ ಬಂದ್‌ ಇರಲಿದೆ. ಸೋಮವಾರದವರೆಗೂ ದೇಗುಲವನ್ನ ಬಂದ್‌ ಮಾಡಲು ನಿರ್ಧರಿಸಲಾಗಿದೆ. ಸೂರ್ಯಗ್ರಹಣದ ಬಳಿಕ ದೇವಸ್ಥಾನದಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನಡೆಯಲಿದೆ. ಗ್ರಹಣದ ನಿಮಿತ್ತ ಜಿಲ್ಲೆಯ ಎಲ್ಲ ದೇವಸ್ಥಾನಗಳು ಬಂದ್‌ ಇರಲಿವೆ. 

ರಾಹುಗ್ರಸ್ತ ಸೂರ್ಯಗ್ರಹಣ: ಹಂಪಿ ವಿರೂಪಾಕ್ಷೇಶ್ವರ ದೇಗುಲ ಬಂದ್‌