Asianet Suvarna News Asianet Suvarna News

ಬಾರದ ಲೋಕಕ್ಕೆ ‘ವಾಲಿ’ದ ಟಗರು; ಪ್ರೇಮಿಗಳ ಕಣ್ಣೀರು

ಶಿವಮೊಗ್ಗ: ರಾಜ್ಯ ಮಟ್ಟದ ಬೆಟ್ಟಿಂಗ್ ಸ್ಪರ್ಧೆಗಳಲ್ಲಿ ನಂ. 1 ಆಗಿದ್ದ ಟಗರು ವಾಲಿ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಭದ್ರಾವತಿ ತಾಲೂಕಿನ ಅರಕರೆ ಗ್ರಾಮದ ಬಸವರಾಜ್ ರವರ 4 ವರ್ಷದ ಟಗರು ವಾಲಿ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದ್ದು ಇಡಿ ಗ್ರಾಮವೇ ಕಂಬನಿಗೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ  ಟಗರು ಕಾಳಗದಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದ ವಾಲಿ ಸಾವು ಟಗರು ಪ್ರೇಮಿಗಳಿಗೆ ನೋವು ತಂದಿದೆ. 
ನಿನ್ನೆ ಮೃತಪಟ್ಟ ವಾಲಿಯ ದೇಹವನ್ನು ಮನೆಯ ಮುಂದೆ ಇರಿಸಿ ಮಾಲೀಕ ಬಸವರಾಜ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ನಂತರ ಗ್ರಾಮದ ಮಾರಿಕಾಂಬಾ ವನದಲ್ಲಿ ಸಂಪ್ರದಾಯ ಬದ್ದವಾಗಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಶಿವಮೊಗ್ಗ: ರಾಜ್ಯ ಮಟ್ಟದ ಬೆಟ್ಟಿಂಗ್ ಸ್ಪರ್ಧೆಗಳಲ್ಲಿ ನಂ. 1 ಆಗಿದ್ದ ಟಗರು ವಾಲಿ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಭದ್ರಾವತಿ ತಾಲೂಕಿನ ಅರಕರೆ ಗ್ರಾಮದ ಬಸವರಾಜ್ ರವರ 4 ವರ್ಷದ ಟಗರು ವಾಲಿ ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದ್ದು ಇಡಿ ಗ್ರಾಮವೇ ಕಂಬನಿಗೆರೆದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ  ಟಗರು ಕಾಳಗದಲ್ಲಿ ಸ್ಪರ್ಧಿಸಿ ಹೆಸರು ಮಾಡಿದ್ದ ವಾಲಿ ಸಾವು ಟಗರು ಪ್ರೇಮಿಗಳಿಗೆ ನೋವು ತಂದಿದೆ. 
ನಿನ್ನೆ ಮೃತಪಟ್ಟ ವಾಲಿಯ ದೇಹವನ್ನು ಮನೆಯ ಮುಂದೆ ಇರಿಸಿ ಮಾಲೀಕ ಬಸವರಾಜ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ನಂತರ ಗ್ರಾಮದ ಮಾರಿಕಾಂಬಾ ವನದಲ್ಲಿ ಸಂಪ್ರದಾಯ ಬದ್ದವಾಗಿ ಅಂತ್ಯ ಸಂಸ್ಕಾರ ನಡೆಸಲಾಯಿತು.

Video Top Stories