Asianet Suvarna News Asianet Suvarna News

ದೇವಿಯ ವಿಗ್ರಹಕ್ಕೆ ಅಂಟಿಸಿದ್ದ ಕೃತಕ ಕಣ್ಣನ್ನು ಪೂಜಾರಿಯಿಂದಲೇ ತೆಗೆಸಿದ ದಿಟ್ಟ ತಹಶೀಲ್ದಾರ್.!

 ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಮೂರ್ತಿಗೆ ಕೃತಕ ಕಣ್ಣು ಅಂಟಿಸಿ ಕಿಡಿಗೇಡಿಗಳು ಜನರನ್ನು ನಂಬಿಸಿದ್ದರು. 

ಬೆಳಗಾವಿ (ಜೂ. 30): ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ಸಂತೂಬಾಯಿ ದೇವಸ್ಥಾನದ ದೇವಿ ಮೂರ್ತಿಗೆ ಕೃತಕ ಕಣ್ಣು ಅಂಟಿಸಿ ಕಿಡಿಗೇಡಿಗಳು ಜನರನ್ನು ನಂಬಿಸಿದ್ದರು. ಈ ಪವಾಡವನ್ನು ನೋಡಲು ಸುತ್ತಮುತ್ತಲಿನ ಜನರು ಆಗಮಿಸುತ್ತಿದ್ಧಾರೆ. ಕೂಡಲೇ ಸ್ಥಳಕ್ಕೆ ಹೋಗಿ ಪರಿಶೀಲಿಸಿದ ತಹಸೀಲ್ದಾರ್, ಪೂಜಾರಿಯಿಂದ ಕೃತಕ ಕಣ್ಣನ್ನು ತೆಗೆಸಿದ್ದಾರೆ. ಹೀಗೆಲ್ಲಾ ಜನರನ್ನು ನಂಬಿಸಿ ಮೌಢ್ಯಕ್ಕೆ ತಳ್ಳಿದರೆ ಕೇಸ್ ಹಾಕುವುದಾಗಿ ಎಚ್ಚರಿಸಿದ್ದಾರೆ.