ಕರ್ಫ್ಯೂ ಉಲ್ಲಂಘಿಸಿದ 17 ವರ್ಷದ ಬಾಲಕ ಪೊಲೀಸ್ ಲಾಠಿ ಏಟಿಗೆ ಬಲಿ
- ಲಾಕ್ಡೌನ್ ನಿಯಮ ಉಲ್ಲಂಘನೆ, ಲಾಠಿಏಟಿಗೆ ಯುವಕ ಬಲಿ
- ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಘಟನೆ
- ಪೊಲೀಸರ ವರ್ತನೆಯಿಂದ ರೊಚ್ಚಿಗೆದ್ದ ಸ್ಥಳೀಯರು
ಲಕ್ನೋ (ಮೇ. 24): ಮನೆಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟಿನಿಂದ ಮೃತಪಟ್ಟಿದ್ದಾನೆ. ಉತ್ತರ ಪ್ರದೇಶ ದ ಉನ್ನಾವ್ ಜಿಲ್ಲೆಯ ಬಂಗಾರ್ಮ ಪ್ರದೇಶದಲ್ಲಿ 17 ವರ್ಷದ ಬಾಲಕನೊಬ್ಬ ತರಕಾರಿ ಮಾರುತ್ತಿದ್ದ. ಕೊರೊನಾ ಕರ್ಫ್ಯೂ ವಿರೋಧಿಸಿದ್ದಕ್ಕಾಗಿ ಆತನನ್ನು ಹಿಡಿದು ಪೊಲೀಸ್ ಪೇದೆಯೊಬ್ಬರು ಲಾಠಿಯಿಂದ ಹೊಡೆದಿದ್ಧಾರೆ. ಬಾಲಕನ ಸ್ತಿತಿ ಬಿಗಡಾಯಿಸುತ್ತಿದ್ದಂತೆ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವಾಗ ಮೃತಪಟ್ಟಿದ್ದಾನೆ.
ಕಲಬುರಗಿ: ಒಂದು ಆಸ್ಪತ್ರೆಯಲ್ಲಿ ಜನಿಸಿದ ಮಗು, ಇನ್ನೊಂದು ಆಸ್ಪತ್ರೆಯಲ್ಲಿ ತಂದೆ ಕೊನೆಯುಸಿರು