ಭಾರತದಲ್ಲಿ ಪುಲ್ವಾಮಾ ಮಾದರಿ ಮತ್ತೊಂದು ದಾಳಿಗೆ ಉಗ್ರರ ಸ್ಕೆಚ್!
ಕೊರೋನಾ ಅಬ್ಬರದ ಮಧ್ಯೆ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಮಹಾಸ್ಕೆಚ್ ರೂಪಿಸಿದ್ದಾರೆ. ಗುಪ್ತಚರ ಇಲಾಖೆಗೆ ಜೈಷ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಶ್ರೀನಗರ(ಮೇ.12): ಕೊರೋನಾ ಅಬ್ಬರದ ಮಧ್ಯೆ ಭಾರತದ ಮೇಲೆ ದಾಳಿ ನಡೆಸಲು ಉಗ್ರರು ಮಹಾಸ್ಕೆಚ್ ರೂಪಿಸಿದ್ದಾರೆ. ಗುಪ್ತಚರ ಇಲಾಖೆಗೆ ಜೈಷ್ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಭಾರತದಲ್ಲಿ, ಸೇನೆಯನ್ನು ಗುರಿಯಾಗಿಸಿಕೊಂಡು ಪುಲ್ವಾಮಾ ಮಾದರಿಯಲ್ಲಿ ದಾಳಿ ನಡೆಸಲು ಜೈಷ್ ಉಗ್ರರು ಸ್ಕೆಚ್ ಹಾಕಿರುವುದಾಗಿ ತಿಳಿದು ಬಂದಿದೆ.
ಉಗ್ರರು ಕಾರು ಬಾಂಬ್ ಸ್ಫೋಟಕ್ಕೆ ಭಯೋತ್ಪಾದಕರು ಪ್ಲಾನ್ ಮಾಡಿದ್ದು, ಇದಕ್ಕಾಗಿ ಆತ್ಮಾಹುತಿ ದಾಳಿಕೋರರನ್ನು ಸಂಘಟನೆ ಸಿದ್ಧಪಡಿಸುತ್ತಿದೆ ಎನ್ನಲಾಗಿದೆ.