Asianet Suvarna News Asianet Suvarna News

ಮೈಸೂರು ಪ್ರಕರಣ; ಸಿದ್ದರಾಮಯ್ಯ ಲಾ ಪಾಯಿಂಟ್‌ಗೆ ಪೊಲೀಸರ ಬಳಿ ಉತ್ತರವಿಲ್ಲ!

*  LPG ದರ ಏರಿಕೆಗೆ ಕಾರಣವೇನು? ನಾವು ಕೊಡುವ ತೆರಿಗೆ ಎಷ್ಟು?
*  ದರ ಏರಿಕೆ,  LPG ಸಿಲಿಂಡರ್ ಬರೆ ಎಲ್ಲದರ ಹಿಂದೆ ಇದೆ ತೆರಿಗೆ ಲೆಕ್ಕಾಚಾರ
*  ಗಣೇಶ ಹಬ್ಬಕ್ಕೆ ಅವಕಾಶ ಹೇಗಿರಲಿದೆ? ವಿಪಕ್ಷದವರು ಹೇಳಿದ್ದೇನು? 
* ಬೆಂಗಳೂರು ಭೀಕರ ಅಪಘಾತಕ್ಕೆ ಅಸಲಿ ಕಾರಣವೇನು?

ಬೆಂಗಳೂರು(ಸೆ. 01)  ಮತ್ತೆ ಎಲ್‌ಪಿಜಿ ದರ ಏರಿಕೆಯಾಗಿದೆ. ಮೂರು ತಿಂಗಳಲ್ಲಿ ಬೆಲೆ ಏರಿಕೆಯನ್ನು ನೀವೇ ನೋಡಿಕೊಂಡು ಬನ್ನಿ.. ದರ ಏರಿಕೆ,  LPG ಸಿಲಿಂಡರ್ ಬರೆ ಎಲ್ಲದರ ಹಿಂದೆ ಇದೆ ತೆರಿಗೆ ಲೆಕ್ಕಾಚಾರವೇನು? ಗಣೇಶೋತ್ಸವಕ್ಕೆ ಅವಕಾಶ ನೀಡಲು ಸರ್ಕಾರ ವಿಳಂಬ ತಾಳುತ್ತಿರುವುದಕ್ಕೆ ಸರ್ಕಾರವನ್ನು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಪೊಲೀಸರಿಂದ ಸಿದ್ದರಾಮಯ್ಯ ಪಡೆದುಕೊಂಡ ಮಾಹಿತಿಗಳು ಏನು?

ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.  ಮೈಸೂರು ಗ್ಯಾಂಗ್‌ರೇಪ್‌ ನಡೆದ ಸ್ಥಳಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದರು. ಈ ಸಂದರ್ಭ  ಪೊಲೀಸರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ರು..ಸಿದ್ದು ಪ್ರಶ್ನೆಗೆ ಪೊಲೀಸ್ರು ತಡಬಡಾಯಿಸಿದ್ರು. ಸರ್ಕಾರ ರಚನೆ ಮಾಡುವ ತಯಾರಿಯಲ್ಲಿ ತಾಲಿಬಾನಿಗಳು ಇದ್ದಾರೆ. ಪಕ್ಕದ ದೇಶ ಇರಾನ್ ಮಾದರಿಯಲ್ಲಿ ಸರ್ಕಾರ ರಚಿಸಲು ತಾಲಿಬಾನಿಗಳು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇದರ ಮಧ್ಯೆ ಬಾಟೆಲ್ ಟ್ವಿಸ್ಟ್ ಸಿಕ್ಕಿದೆ. ಅಪಘಾತಕ್ಕೂ ಮುಂಚೆ ಯುವತಿಯರು ಮದ್ಯ ಖರೀದಿಸಿರುವ ಸಾಕ್ಷ್ಯ ಸಿಕ್ಕಿದೆ.