ಸರ್ಕಾರದ ದುಡ್ಡಲ್ಲಿ ಮಸೀದಿ ರೀತಿ ಬಸ್ ನಿಲ್ದಾಣ, ಮೈಸೂರಿನಲ್ಲಿ ಮತ್ತೊಂದು ಧರ್ಮದಂಗಲ್ !
ರಾಜ್ಯದಲ್ಲಿ 8,100 ಕ್ಲಾಸ್ ರೂಂ ನಿರ್ಮಾಣ, ಆದರೆ ಕೇಸರಿ ಬಣ್ಣದ ವಿವಾದ, ಸಿದ್ದುಗೆ ಕೋಲಾರ ಕ್ಷೇತ್ರದ ಮೇಲೆ ಒಲವು ಯಾಕೆ?, ಸಿದ್ದು ಯುಪಿ, ಕಾಶ್ಮೀರ, ಪಾಕಿಸ್ತಾನದಲ್ಲಿ ನಿಂತ್ರೂ ಗೆಲ್ತಾರೆ, ಬಿಜೆಪಿ ಲೇವಡಿ, ಸಿದ್ದು ಯುಪಿ, ಕಾಶ್ಮೀರ, ಪಾಕಿಸ್ತಾನದಲ್ಲಿ ನಿಂತ್ರೂ ಗೆಲ್ತಾರೆ, ಬಿಜೆಪಿ ಲೇವಡಿ ಸೇರಿದಂತೆ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ
ಮೈಸೂರಿನಲ್ಲಿ ಬಿಜೆಪಿ ಶಾಸಕ ರಾಮದಾಸ್ ಅವರ ಕ್ಷೇತ್ರದಲ್ಲಿ ಬಸ್ ನಿಲ್ದಾಣವನ್ನು ಮಸೀದಿ ಗುಂಬಜ್ ರೀತಿಯಲ್ಲಿ ನಿರ್ಮಿಸಾಗಿದೆ. ಈ ಕುರಿತು ಸಂಸದ ಪ್ರತಾಪ್ ಸಿಂ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ದುಡ್ಡಲ್ಲಿ ಮಸೀದಿ ರೀತಿಯಲ್ಲಿ ಬಸ್ ನಿಲ್ದಾಣ ಮಾಡಿದ್ದು ಯಾಕೆ? ಸರ್ಕಾರ ತಕ್ಷಣವೇ ಇದನ್ನು ಒಡೆದು ಹಾಕಬೇಕು. ಇಲ್ಲದಿದ್ದರೆ ನಾನೇ ಜೆಸಿಬಿ ಕರೆಸಿ ಒಡೆದು ಹಾಕುತ್ತೇನೆ ಎಂದು ಪ್ರತಾಪ್ ಸಿಂಹ ಎಚ್ಚರಿಸಿದ್ದಾರೆ. ಈ ಬಸ್ ನಿಲ್ದಾಣವನ್ನು ಎಂಜಿನೀಯರ್ ತಬ್ರೈಸ್ ಕಟ್ಟಿಸಿದ್ದಾರೆ. ಇದರ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.