Asianet Suvarna News Asianet Suvarna News

ರಫೇಲ್ ಪೈಲೆಟ್ ಟೀಂನಲ್ಲಿದ್ದಾರೆ ಓರ್ವ ಕನ್ನಡಿಗ..!

ರಫೇಲ್ ಯುದ್ಧ ವಿಮಾನಗಳನ್ನು ಚಾಲನೆ ಮಾಡುವವರ ಪೈಕಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತ ಕನ್ನಡಿಗ ಅರುಣ್ ಕುಮಾರ್ ಕೂಡಾ ಒಬ್ಬರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಜು.29): ಬರೋಬ್ಬರಿ ಎರಡು ದಶಕಗಳ ಭಾರತದ ವಾಯುಸೇನೆಯ ಕನಸು ಕೊನೆಗೂ ನನಸಾಗಿದೆ. ಫ್ರಾನ್ಸ್‌ನಿಂದ ಭಾರತಕ್ಕೆ ಇಂದು 5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿಯಲಿವೆ.

ರಫೇಲ್ ಯುದ್ಧ ವಿಮಾನಗಳನ್ನು ಚಾಲನೆ ಮಾಡುವವರ ಪೈಕಿ ವಿಜಯಪುರದ ಸೈನಿಕ ಶಾಲೆಯಲ್ಲಿ ಕಲಿತ ಕನ್ನಡಿಗ ಅರುಣ್ ಕುಮಾರ್ ಕೂಡಾ ಒಬ್ಬರಾಗಿದ್ದಾರೆ. 

ರಫೇಲ್‌ ಸ್ವಾಗತಕ್ಕೆ ಅಂಬಾಲಾ ಸಜ್ಜು ; ವಿಶೇಷತೆಗಳಿವು..!

2002ರಲ್ಲಿ ವಾಯುಸೇನೆ ನೇಮಕವಾಗಿದ್ದ ಅರುಣ್ ಕುಮಾರ್ ಕಳೆದ 15 ವರ್ಷಗಳಿಂದ ವಿಜಯಪುರದ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಫ್ರಾನ್ಸ್‌ನಲ್ಲಿ 3 ವರ್ಷಗಳ ಕಾಲ ಸುಖೋಯ್ ಯುದ್ಧ ವಿಮಾನದಲ್ಲಿದ್ದುಕೊಂಡು ತರಬೇತಿ ಸಲ್ಲಿಸುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.