Asianet Suvarna News Asianet Suvarna News

ತುಳಸಿಯಲ್ಲಿದೆ ದಿವ್ಯ ಔಷಧಿ ಗುಣ, ಸರ್ವರೋಗ ನಾಶ: ಡಾ.ಹೆಚ್.ಎಸ್.ಪ್ರೇಮಾ

ತುಳಸಿ ಅತ್ಯಂತ ಪವಿತ್ರ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ತುಳಸಿ ಅತ್ಯಂತ ಆರೋಗ್ಯಕರ ಎಂದು ತುಂಬಾ ವರ್ಷಗಳ ಹಿಂದೆಯೇ ಹೇಳಲಾಗಿದೆ ಎಂದು ಡಾ.ಹೆಚ್.ಎಸ್.ಪ್ರೇಮಾ ತಿಳಿಸಿದ್ದಾರೆ.

ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡವನ್ನು ಹಾಕುತ್ತಾರೆ . ಯಾಕೆಂದರೆ ತುಳಸಿಯಿಂದ ಬೀಸಿ ಬಂದ ಗಾಳಿ ನಮ್ಮ ಶ್ವಾಶಕೋಶಕ್ಕೆ ತುಂಬಾ ಒಳ್ಳೆಯದು ಎಂದು ಆಹಾರ ತಜ್ಞೆ ಡಾ. ಹೆಚ್.ಎಸ್.ಪ್ರೇಮಾ ಹೇಳಿದರು. ತುಳಸಿಯಿಂದ ನೆಗಡಿ ಹಾಗೂ ಕೆಮ್ಮು ದೂರಾಗಲಿದೆ. ತುಳಸಿ ಎಲೆಯನ್ನು ಹುಳುಗಳು ತಿನ್ನಲ್ಲ, ಯಾಕೆಂದರೆ ತುಳಸಿಗೆ ಅಷ್ಟು ಶಕ್ತಿಯಿದೆ. ಕೀಟಗಳನ್ನು ನಿವಾರಣೆ ಮಾಡುತ್ತದೆ, ವೈರಾಣುಗಳಿಂದ ದೂರ ಇರುತ್ತದೆ. ತುಳಸಿಯಲ್ಲಿನ ಅಂಶಗಳು ನಮ್ಮ ದೇಹದಲ್ಲಿನ ವೈರಾಣು ವಿರುದ್ದ ಹೋರಾಡುತ್ತದೆ. ಧಾರ್ಮಿಕವಾಗಿ ಹೇಳುವುದಾದರೆ ತುಳಸಿ ಜಾಗದಲ್ಲಿ ಪರಮಾತ್ಮ ವಿಷ್ಣು ಇದ್ದಾನೆ, ಹೀಗಾಗಿ ತುಳಸಿಯಿಂದ ನಮಗೆ ಧೈರ್ಯ ಸಿಗುತ್ತದೆ ಎಂದರು.

Video Top Stories