Asianet Suvarna News Asianet Suvarna News

ಶಾಲೆ ತೆರೆಯೋದು ಬೇಡ, ಆನ್‌ಲೈನ್ ಕ್ಲಾಸ್ ಮುಂದುವರೆಸೋದು ಸೂಕ್ತ: ಬಿವೈ ರಾಘವೇಂದ್ರ

ಕೊರೊನಾ ಸಂಕಷ್ಟ ಇನ್ನೂ ಮುಗಿದಿಲ್ಲ. ಹೀಗಿರುವಾಗ ಶಾಲೆಗಳನ್ನು ಇಷ್ಟು ಬೇಗ ತೆರೆಯಬೇಕಾ? ಅಥವಾ ಮುಂದೂಡಬೇಕಾ? ಎಂದು ಸುವರ್ಣ ನ್ಯೂಸ್- ಕನ್ನಡ ಪ್ರಭ ಅಭಿಯಾನ ನಡೆಸಿದೆ. 

ಬೆಂಗಳೂರು (ಸೆ. 29): ಕೊರೊನಾ ಸಂಕಷ್ಟ ಇನ್ನೂ ಮುಗಿದಿಲ್ಲ. ಹೀಗಿರುವಾಗ ಶಾಲೆಗಳನ್ನು ಇಷ್ಟು ಬೇಗ ತೆರೆಯಬೇಕಾ? ಅಥವಾ ಮುಂದೂಡಬೇಕಾ? ಎಂದು ಸುವರ್ಣ ನ್ಯೂಸ್- ಕನ್ನಡ ಪ್ರಭ ಅಭಿಯಾನ ನಡೆಸಿದೆ. ಜನಪ್ರತಿನಿಧಿಗಳ, ಪೋಷಕರ ಅಭಿಪ್ರಾಯ ಪಡೆಯುತ್ತಿದೆ. ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಪ್ರತಿಕ್ರಿಯಿಸಿ, ' ಶಾಲೆ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ಧಾರೆ. ಈ ಬಾರಿ ಆನ್‌ಲೈನ್ ಕ್ಲಾಸ್ ಮುಂದುವರೆಸೋದು ಸೂಕ್ತ. ಕೊರೊನಾ ಕಾರಣದಿಂದ ಕಲಾಪವನ್ನೇ ಮುಂದೂಡಿದ್ದೇವೆ. ಹಾಗಾಗಿ ಶಾಲೆಗಳನ್ನು ತೆರೆಯುವುದು ಸೂಕ್ತವಲ್ಲ' ಎಂದು ಹೇಳಿದ್ಧಾರೆ. 

ಸದ್ಯಕ್ಕೆ ಶಾಲೆ ತೆರೆಯುವ ಬದಲು, ಇರುವ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡೋಣ: ರವೀಂದ್ರ ಶ್ರೀಕಂಠಯ್ಯ