Asianet Suvarna News Asianet Suvarna News

8 ತಿಂಗಳ ಸ್ನೇಹ, 1 ತಿಂಗಳ ದ್ವೇಷ..ಬಯಲಾಯ್ತು ನಾಲ್ವರ ಹತ್ಯೆ ಪ್ರಕರಣದ ರಹಸ್ಯ!

ಆತ ಅಲ್ಲಿಗೆ ಬಂದಿದ್ದು ಆಕೆಗಾಗಿ. ಆದರೆ, ಅಗಿದ್ದು ನಾಲ್ಕು ಕೊಲೆ. ತನ್ನನ್ನು ಅವಾಯ್ಡ್‌ ಮಾಡಲು ಆರಂಭಿಸಿದ್ದಾಳೆ ಎಂದು ಅನಿಸಿದ್ದೇ ಆತನಿಗೆ ತಪ್ಪಾಗಿ ಹೋಗಿದೆ. ಅವಳನ್ನ ಮುಗಿಸಲು ಮನೆಯಲ್ಲಿದ್ದ ಚಾಕುವನ್ನು ಆತ ತಂದಿದ್ದ.
 

ಉಡುಪಿ (ನ.24):  ದೀಪಾವಳಿ ಹಬ್ಬದ ದಿನ ಉಡುಪಿಯಲ್ಲಿ ನಾಲ್ಕು ಹೆಣ ಹಾಕಿ ಎಸ್ಕೇಪ್ ಆಗಿದ್ದ ಹಂತಕ ಪೊಲೀಸರಿಗೆ ತಗಲಾಕಿಕೊಂಡಿದ್ದಾನೆ. ಸದ್ದಿಲ್ಲದೇ ಬಂದು ಹತ್ತೇ ನಿಮಿಷದಲ್ಲಿ ನಾಲ್ವರ ಹೆಣ ಹಾಕಿ ಹೋದವನನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 

ಆತ ಪೊಲೀಸರ ಅತಿಥಿಯಾಗಿ ಒಂದು ವಾರವೇ ಕಳೆದರೂ ಕೊಲೆ ಮಾಡಿದ್ದಕ್ಕೆ ಕಾರಣವೇನು ಅನ್ನೋದು ಅಧಿಕೃತವಾಗಿ ಬಹಿರಂಗವಾಗಿರಲಿಲ್ಲ. ಪೊಲೀಸರೆದುರು ಎಲ್ಲ ಸತ್ಯವನ್ನ ಹೇಳಿದ್ದರೂ ಪೊಲೀಸರು ಮಾತ್ರ ಬಹಿರಂಗವಾಗಿ ಏನೂ ಹೇಳಿರಲಿಲ್ಲ. 

ಉಡುಪಿ ಕುಟುಂಬದ ನಾಲ್ವರ ಕೊಲೆ: ಆರೋಪಿ ಪ್ರವೀಣ್‌ ಚೌಗಲೆಯನ್ನು 14 ದಿನ ಪೊಲೀಸರಿಗೊಪ್ಪಿಸಿದ ಕೋರ್ಟ್

ಕೊಲೆಯಾಗಿ 12 ದಿನಗಳ ನಂತರ ಈ ಕೇಸ್ ಬಗ್ಗೆ ಪೊಲೀಸರು ಬಾಯಿಬಿಟ್ಟಿದ್ದಾರೆ. ಆ ನಾಲ್ಕು ಕೊಲೆಗಳಿಗೆ ಕಾರಣವೇನು? ಅದು ಹೇಗಾಯ್ತು..? ಅನ್ನೋ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Video Top Stories