Asianet Suvarna News Asianet Suvarna News

ಮೈಸೂರು ಮರ್ಯಾದಾ ಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್! ಶಾಲಿನಿ ಸ್ಫೋಟಕ ಆಡಿಯೋ ಔಟ್

ಮೈಸೂರು ಯುವತಿ ಮರ್ಯಾದಾ ಹತ್ಯೆ ಕೇಸ್‌ಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರ ಮಂಜುನಾಥ್ ಬಳಿ ಮೃತ ಶಾಲಿನ ಸಾವಿನ ಬಗ್ಗೆ ಮಾತನಾಡಿರುವ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಮೈಸೂರು (ಜೂ. 09): ಪಿರಿಯಾಪಟ್ಟಣ (Piriyapattana) ಯುವತಿ ಮರ್ಯಾದಾ ಹತ್ಯೆ (Maryada Hatye) ಕೇಸ್‌ಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರ ಮಂಜುನಾಥ್ ಬಳಿ ಮೃತ ಶಾಲಿನ ಸಾವಿನ ಬಗ್ಗೆ ಮಾತನಾಡಿರುವ ಆಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ನಾನು ಸತ್ತರೆ ನನ್ನ ಅಪ್ಪ, ಅಮ್ಮ, ಚಿಕ್ಕಪ್ಪ, ಮಾವಂದಿರೇ ಕಾರಣ. ನನ್ನನ್ನು ಸಾಯಿಸಿ ನಿನ್ನ ತಲೆಗೆ ಕಟ್ಟೋಕೆ ಸಂಚು ಮಾಡ್ತಿದ್ದಾರೆ. ಈ ಆಡಿಯೋ ರೆಕಾರ್ಡ್ ಮಾಡಿಟ್ಟುಕೊಂಡು ಪೊಲೀಸರಿಗೆ ನೀಡು' ಎಂದು ಶಾಲಿನಿ ಸಾಯುವ ಮುನ್ನ ಸೂಚನೆ ನೀಡಿದ್ದಳು. ಅದರಂತೆ ಮಂಜುನಾಥ್ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ. 

ಅನ್ಯಜಾತಿಯವನ ಪ್ರೀತಿಸಿದ ಮಗಳ ಕೊಂದ ಅಪ್ಪ, ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ!

ಅಪ್ರಾಪ್ತ ವಯಸ್ಸಿನ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದ್ದಕ್ಕೆ ತಂದೆಯೆ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ   ನಡೆದಿದೆ. ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ(17) ಮೃತಪಟ್ಟದುರ್ದೈವಿ.