Asianet Suvarna News Asianet Suvarna News

ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ: ಸಾವಿಗೂ ಮುನ್ನ ಪೊಲೀಸರಿಗೆ ಶಾಲಿನಿ ಬರೆದ ಪತ್ರ

ಸಾವಿಗೂ ಮುನ್ನ ಶಾಲಿನಿ ಡೆತ್‌ನೋಟ್ ಬರೆದಿದ್ದಳು. ಅನ್ಯಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮನೆಯವರಿಂದಲೇ ಕಿರುಕುಳವಾಗುತ್ತಿದೆ. ನನ್ನ ಸಾವಿಗೆ ಅಪ್ಪ, ಅಮ್ಮ, ಸಂಬಂಧಿಕರೇ ಕಾರಣ, ನನ್ನ ಪ್ರಿಯಕರ ಅಮಾಯಕ, ಹಾಗಾಗಿ ಅವನಿಗೆ ತೊಂದರೆ ಕೊಡಬೇಡಿ' ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ. 

ಪಿರಿಯಾಪಟ್ಟಣ (ಜೂ. 09): ಅಪ್ರಾಪ್ತ ವಯಸ್ಸಿನ ಮಗಳು ಅನ್ಯಜಾತಿಯ ಯುವಕನನ್ನು ಪ್ರೀತಿಸುತ್ತಿದ್ದುದ್ದಕ್ಕೆ ತಂದೆಯೆ ಮಗಳ ಕತ್ತು ಹಿಸುಕಿ ಕೊಂದು ಪೊಲೀಸರಿಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಕಗ್ಗುಂಡಿ ಗ್ರಾಮದ ಶಾಲಿನಿ(17) ಮೃತಪಟ್ಟದುರ್ದೈವಿ.

ಸಾವಿಗೂ ಮುನ್ನ ಶಾಲಿನಿ ಡೆತ್‌ನೋಟ್ ಬರೆದಿದ್ದಳು. ಅನ್ಯಜಾತಿ ಯುವಕನನ್ನು ಪ್ರೀತಿಸಿದ್ದಕ್ಕೆ ಮನೆಯವರಿಂದಲೇ ಕಿರುಕುಳವಾಗುತ್ತಿದೆ. ನನ್ನ ಸಾವಿಗೆ ಅಪ್ಪ, ಅಮ್ಮ, ಸಂಬಂಧಿಕರೇ ಕಾರಣ, ನನ್ನ ಪ್ರಿಯಕರ ಅಮಾಯಕ, ಹಾಗಾಗಿ ಅವನಿಗೆ ತೊಂದರೆ ಕೊಡಬೇಡಿ' ಎಂದು ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾಳೆ.