ಖಾಕಿ ಖದರ್ಗೆ ಬೆಚ್ಚಿದ ಪುಂಡರು, ಜನ ಸಾಮಾನ್ಯರು ನಿರಾಳ!
ಮಂಗಳವಾರ ರಾತ್ರಿ ಇಡೀ ಕೆಂಡದಂತಿದ್ದ ಕೆಜಿ ಹಳ್ಳಿಯಲ್ಲಿ ಬುಧವಾರ ಸಂಪೂರ್ಣ ಮೌನ ಕವಿದಿತ್ತು. ಖಾಕಿ ಬೇಟೆಗೆ ಗಲಭೆಕೋರರು ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ಪುಂಡರು ಜೈಲು ಸೇರುತ್ತಿದ್ದಂತೆಯೇ ಇತ್ತ ಜನ ಸಾಮಾನ್ಯರು ನಿರಾಳರಾಗಿದ್ದಾರೆ.
ಮಂಗಳವಾರ ರಾತ್ರಿ ಇಡೀ ಕೆಂಡದಂತಿದ್ದ ಕೆಜಿ ಹಳ್ಳಿಯಲ್ಲಿ ಬುಧವಾರ ಸಂಪೂರ್ಣ ಮೌನ ಕವಿದಿತ್ತು. ಖಾಕಿ ಬೇಟೆಗೆ ಗಲಭೆಕೋರರು ಬಾಲ ಮುದುರಿಕೊಂಡು ಸುಮ್ಮನಾಗಿದ್ದಾರೆ. ಪುಂಡರು ಜೈಲು ಸೇರುತ್ತಿದ್ದಂತೆಯೇ ಇತ್ತ ಜನ ಸಾಮಾನ್ಯರು ನಿರಾಳರಾಗಿದ್ದಾರೆ.
ಹೌದು ಖಾಕಿ ಖದರ್ಗೆ ಪುಂಡರ್ ಫುಲ್ ಸೈಲೆಂಟ್ ಆಗಿದ್ದಾರೆ. ಹೀಗಿದ್ದರೂ ಗಲಭೆಪೀಡಿತ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ಕಾಖಿ ಕಟ್ಟೆಚ್ಚರ ವಹಿಸಿದೆ. ಅಲ್ಲದೇ ಅನಾವಶ್ಯಕ ಓಡಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ.