Asianet Suvarna News Asianet Suvarna News

ಹೆಗ್ಗನಹಳ್ಳಿ ಮರ್ಡರ್ ಕೇಸ್: ಕೊಲೆಗಾರ ಪತಿಯಲ್ಲ, ಕೇಸ್‌ಗೆ ಸಿಕ್ತು ಮೇಜರ್ ಟ್ವಿಸ್ಟ್!

ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪತಿಯೇ ಕೊಲೆಗಾರ ಎಂದುಕೊಂಡಿದ್ದ ಪೊಲೀಸರ ತನಿಖೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದು ಪತಿ ಶಿವರಾಜ್ ಅಲ್ಲ, ಮೊದಲ ಮಹಡಿಯಲ್ಲಿ ವಾಸವಾಗಿದ್ದ ರಂಗದಾಮಯ್ಯ ಎನ್ನುವ ವ್ಯಕ್ತಿ! ಏನಿದು ಮೇಜರ್ ಟ್ವಿಸ್ಟ್? ಇಲ್ಲಿದೆ ನೋಡಿ

 

ಬೆಂಗಳೂರು (ಫೆ. 12):  ಹೆಗ್ಗನಹಳ್ಳಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪತಿಯೇ ಕೊಲೆಗಾರ ಎಂದುಕೊಂಡಿದ್ದ ಪೊಲೀಸರ ತನಿಖೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದು ಪತಿ ಶಿವರಾಜ್ ಅಲ್ಲ, ಮೊದಲ ಮಹಡಿಯಲ್ಲಿ ವಾಸವಾಗಿದ್ದ ರಂಗದಾಮಯ್ಯ ಎನ್ನುವ ವ್ಯಕ್ತಿ! ಏನಿದು ಮೇಜರ್ ಟ್ವಿಸ್ಟ್? ಇಲ್ಲಿದೆ ನೋಡಿ

ಪತ್ನಿಯ ಕೊಲ್ಲಲು ಬಂದು ಮಾವನನ್ನು ಕೊಂದ ಅಳಿಯ..!

ಲಕ್ಷ್ಮೀ ಪತಿ ಶಿವರಾಜ್ ಊರಿಗೆ ತೆರಳಿದ್ದ ವೇಳೆ ಮನೆಯಲ್ಲಿ ಆಭರಣ ಕಳುವಾಗಿತ್ತು. ರಾಜಗೋಪಾಲನಗರ ಪೊಲೀಸ್ ಠಾಣೆಗೆ ಲಕ್ಷ್ಮೀ ದೂರು ನೀಡಿದ್ದರು. ರಂಗದಾಮಯ್ಯನ ಮೇಲೆ ಅನುಮಾನವಿದೆ ಎಂದು ಪೊಲೀಸರ ಬಳಿ ಶಂಕೆ ವ್ಯಕ್ತಪಡಿಸಿದ್ದರು. ಸಿಟ್ಟಿಗೆದ್ದ ರಂಗದಾಮಯ್ಯ ಮನೆಗೆ ಬಂದು ಗಲಾಟೆ ಮಾಡಿದ್ದಾರೆ. ಆಗ ಲಕ್ಷ್ಮೀ ಕಪಾಳಕ್ಕೆ ಹೊಡೆದಿದ್ದಾರೆ. ಹೊಡೆದ ರಭಸಕ್ಕೆ ಲಕ್ಷ್ಮೀ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.