Asianet Suvarna News Asianet Suvarna News

ಬಡವರಿಗೆ 1 ಕೋಟಿ ದೇಣಿಗೆ ನೀಡಿದ ಸೌತ್ ಸ್ಟಾರ್: ಸಹಾಯ ಮಾಡೋದ್ರಲ್ಲಿ ಎತ್ತಿಗೆ ಕೈ ನಟ ಕಾರ್ತಿ!

ಕಾಲಿವುಡ್ ನಟ ಕಾರ್ತಿ ಕುರಿತಾಗಿ ಈ ಸುದ್ದಿ ವೈರಲ್ ಆಗುತ್ತಿದೆ. ತಮಿಳು ನಟ ಸೂರ್ಯ ಸಹೋದರ ಕಾರ್ತಿ ಸಹಾಯ ಮಾಡೋದ್ರಲ್ಲಿ ಯಾವಾಗಲೂ ಒಂದು ಕೈ ಮುಂದಿರುತ್ತಾರೆ. ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನವೇ ಬಡವರ ಸಹಾಯಕ್ಕಾಗಿ 1 ಕೋಟಿ ಹಣ ದೇಣಿಗೆ ನೀಡಿ ಮತ್ತೊಮ್ಮ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. 

First Published Nov 1, 2023, 1:46 PM IST | Last Updated Nov 1, 2023, 1:46 PM IST

ಕಾಲಿವುಡ್ ನಟ ಕಾರ್ತಿ ಕುರಿತಾಗಿ ಈ ಸುದ್ದಿ ವೈರಲ್ ಆಗುತ್ತಿದೆ. ತಮಿಳು ನಟ ಸೂರ್ಯ ಸಹೋದರ ಕಾರ್ತಿ ಸಹಾಯ ಮಾಡೋದ್ರಲ್ಲಿ ಯಾವಾಗಲೂ ಒಂದು ಕೈ ಮುಂದಿರುತ್ತಾರೆ. ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನವೇ ಬಡವರ ಸಹಾಯಕ್ಕಾಗಿ 1 ಕೋಟಿ ಹಣ ದೇಣಿಗೆ ನೀಡಿ ಮತ್ತೊಮ್ಮ ಅಭಿಮಾನಿಗಳ ಪಾಲಿನ ಆರಾಧ್ಯ ದೈವವಾಗಿದ್ದಾರೆ. ನಟ ಕಾರ್ತಿ ತಮಿಳು ಚಿತ್ರರಂಗದ ಅತ್ಯಂತ ಸರಳ ಮತ್ತು ಹೃದಯ ವೈಶಾಲ್ಯ ಇರುವ ನಟರಲ್ಲಿ ಒಬ್ಬರು. ಅನಾಥರಿಗಾಗಿ ಫೌಂಡೇಶನ್ ಅನ್ನು ಸಹ ನಡೆಸುತ್ತಿದ್ದಾರೆ. ಈಗ ಈ ಸ್ಟಾರ್ ನಟ ಮತ್ತೊಮ್ಮೆ ತಮ್ಮ ಹಿರಿಮೆಯನ್ನು ತೋರಿಸಿದ್ದಾರೆ. ದೀಪಾವಳಿಗೆ ಕಾರ್ತಿ ಅಭಿನಯದ ಜಪಾನ್ ಸಿನಿಮಾ ಬಿಡುಗಡೆಯಾಗುತ್ತಿದ್ದು. ಸಿನಿಮಾ ಬಿಡುಗಡೆಗೂ ಮೊದಲೆ ದುರ್ಬಲರಿಗಾಘಿ 1 ಕೋಟಿ ಹಣ ಸಹಾಯ ಮಾಡಿ ಮತ್ತೊಮ್ಮೆ ಗ್ರೇಟ್  ಹ್ಯೂಮನ್ ಬೀಯಿಂಗ್ ಎನ್ನಿಸಿಕೊಂಡಿದ್ದಾರೆ. 

ಕಾರ್ತಿ ಸಾಮಾಜಿಕ ಕಾರ್ಯಕರ್ತರು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಮತ್ತು ಕೆಲವು ಜನರಿಗೆ ಆಹಾರಕ್ಕಾಗಿ 1 ಕೋಟಿ ರೂ.ಗಳಲ್ಲಿ ತಲಾ 25 ಲಕ್ಷ ರೂ ಕೊಟ್ಟಿದ್ದಾರೆ. ಕೋವಿಡ್ ಸಮಯದಲ್ಲಿಯೂ ಕಾರ್ತಿ ಅವರು ಆರ್ಥಿಕವಾಗಿ ದುರ್ಬಲರಿಗೆ 12 ಲಕ್ಷಕ್ಕೂ ಹೆಚ್ಚು ಹಣ ನೀಡಿದ್ದರು. 2013 ರಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಕಾರ್ತಿ ಜನರಿಗೆ ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ್ದರು. 2021 ರಲ್ಲಿ ಕೊರೋನಾದಿಂದ ಹದಗೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ನೀಡಿದ್ದರು. ಒಟ್ಟಿನಲ್ಲಿ ಬಂದಿದ್ದನ್ನೆಲ್ಲಾ ತನ್ನ ಏಳಿಗೆಗೆ ಮಾತ್ರ ಬಳಸದೆ.. ಬಡವರಿಗೂ ಸಹಾಯ ಮಾಡುತ್ತಿರೋ ಕಾರ್ತಿಯ ಈ ಗುಣ ಇದೀಗ ಪ್ರಶಂಸೆಗೆ ಕಾರಣವಾಗಿದೆ.