Asianet Suvarna News Asianet Suvarna News

ಅಲೆಮಾರಿಗಳ ಜೀವನ "ಬ್ಯಾರೇನೇ ಐತಿ" ಎನ್ನುತ್ತ ಬಂದ ಹೊಯ್ಸಳ.!

ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ‘ಗುರುದೇವ್ ಹೊಯ್ಸಳ’, ದಿನೇ ದಿನೇ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಹಿಟ್ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

First Published Mar 28, 2023, 3:42 PM IST | Last Updated Mar 28, 2023, 3:42 PM IST

ಮಾ 30ರಂದು ತೆರೆ ಮೆಲೆ ಬರಲು ಸಿದ್ದವಾಗಿರುವ  'ಗುರುದೇವ್ ಹೊಯ್ಸಳ' ತನ್ನ ಹಾಡಿನಿಂದ ಎಲ್ಲೆಡೆ ಸದ್ದು ಮಾಡುತ್ತಿದೆ.  ಇದು ಧನಂಜಯ್  25ನೇ ಸಿನಿಮಾ ಅನ್ನೋದು ವಿಶೇಷವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿದ ಈ ಸಿನಿಮಾ ಮೂರನೇ ಹಾಡನ್ನು ಬಿಡುಗಡೆ ಮಾಡಿದೆ. ‘ಬ್ಯಾರೇನೇ ಐತಿ’ ಎನ್ನುವ ಈ ಹಾಡು ಬಿಡುಗಡೆ ಮಾಡಿದ್ದು, ಇದು ಉತ್ತರ ಕರ್ನಾಟಕ ಭಾಗದಲ್ಲಿ ವಾಸವಾಗಿರುವ ಅಲೆಮಾರಿಗಳ ಜೀವನ ಹೇಗಿರುತ್ತದೆ ಎಂದು ವರ್ಣನೆ ಮಾಡುತ್ತದೆ. ಅಲೆಮಾರಿಗಳ ಬಗ್ಗೆ ಇರುವ ಈ ಹಾಡಿಗೆ ಯೋಗರಾಜ್ ಭಟ್  ಸಾಹಿತ್ಯ ಬರೆದಿದ್ದು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೊಗಸಾಗಿ ಹಾಡಿದ್ದಾರೆ.