Panchanga: ಇಂದು ಸಂಕಷ್ಟಹರ, ಗಣೇಶನ ಪ್ರಾರ್ಥನೆಯನ್ನು ಮಾಡಿ...
ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಜ್ಯೇಷ್ಠ ನಕ್ಷತ್ರವನ್ನು ಅಗ್ರಾಹ್ಯ ನಕ್ಷತ್ರ ಎನ್ನಲಾಗುತ್ತದೆ ಅಷ್ಟು ಶುಭ ಕಾರ್ಯವನ್ನು ಮಾಡುವುದಿಲ್ಲ. ಆದರೆ ಜೇಷ್ಠ ಮಾಸ ಒಳ್ಳೆಯದು. ಈ ದಿನ ಸಂಕಷ್ಟಹರವಿದೆ. ಅಂದರೆ ಕಷ್ಟಗಳನ್ನು ತೊಲಗಿಸುವಂತದ್ದು. ಸಂಕಷ್ಟಹರ ಗಣಪತಿ ಹಾಗಾಗಿ ಗಣೇಶನ ಪ್ರಾರ್ಥನೆಯನ್ನು ಮಾಡಿ. ಇಂದು ಅಥರ್ವಶೀರ್ಷ ಮಂತ್ರ ವನ್ನು ಹೇಳಿದರೆ ಒಳ್ಳೆಯದು ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..