Panchanga: ಇಂದು ದಶಮಿ ತಿಥಿ, ವಾಸವಿ ಯಾಗ ಮಾಡಿ...
ಇಂದಿನ ಪಂಚಾಂಗ ಫಲ ಈ ರೀತಿ ಇದ್ದು, ಯಾವ್ಯಾವ ರಾಶಿಗೆ ಯಾವ ರೀತಿಯ ಫಲ ಇದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂದು ಶ್ರೀ ಶೋಭಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಕ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಮುಖಾ ನಕ್ಷತ್ರ ಇದೆ. ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಇಂದು ವಾಸವಾಂಬ ಜಯಂತಿ. ವಾಸವಾಂಬಳನ್ನು ಅಗ್ನಿ ಸ್ವರುಪಿಣಿ ಎಂದು ಕರೆಯಲಾಗುತ್ತದೆ. ಅಗ್ನಿ ಶುಭ್ರತೆಯ ಸಂಕೇತ . ಧನ ಆಭರಣ ಎಲ್ಲವನ್ನು ಕಾಣುವಂತದ್ದು ಅಗ್ನಿಯಲ್ಲಿ, ಅಗ್ನಿ ,ವಾಸವಾಂಬಿ ಎರಡು ಒಂದೇ. ಹೀಗಾಗಿ ಇಂದು ವಾಸವಿಯನ್ನು ಸ್ಮರಿಸಿಕೊಂಡರೆ ನಾವು ಶುಭ್ರವಾಗುತ್ತೆವೆ , ಹಣ ಬರುತ್ತದೆ. ಅದಲ್ಲದೆ ವಾಸವಿ ಯಾಗದ ಸಂಕೇತವಾಗಿರುವದರಿಂದ ಇಂದು ಯಾಗ ಮಾಡುವುದರಿಂದ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಿಗಳು ತಿಳಿಸಿದ್ದಾರೆ. ಇನ್ನು ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..