ಟ್ವಿಟ್ಟರ್ ಮಾಡೊ ಅವಾಂತರ ಒಂದೇ, ಎರಡೇ?| ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆ ಡಿಲೀಟ್ ಮಾಡಿದ್ದ ಟ್ವಿಟ್ಟರ್| ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಚಿನಾರ್ ಕಾರ್ಪ್ಸ್| ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆ ಡೀಲಿಟ್ ಮಾಡಿದ್ದ ಟ್ವಿಟ್ಟರ್| ಟ್ವಿಟ್ಟರ್ ನಡೆ ಖಂಡಿಸಿದ್ದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್| ಚಿನಾರ್ ಕಾರ್ಪ್ಸ್ ಖಾತೆ ರಿಸ್ಟೋರ್ ಮಾಡಿ ವಿವಾದಕ್ಕೆ ಇತಿಶ್ರೀ ಹಾಡಿದ ಟ್ವಿಟ್ಟರ್| 

ನವದೆಹಲಿ(ಜೂ.07): ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನೆಯ 15ನೇ ಡಿವಿಜನ್ ಚಿನಾರ್ ಕಾರ್ಪ್ಸ್‌ನ ಅಧಿಕೃತ ಖಾತೆಯನ್ನು ಟ್ವಿಟ್ಟರ್ ಡಿಲೀಟ್ ಮಾಡಿ ವಿವಾದ ಸೃಷ್ಟಿಸಿದೆ.

Scroll to load tweet…

ಚಿನಾರ್ ಕಾರ್ಪ್ಸ್ ನ ಅಧಿಕೃತ ಖಾತೆಯನ್ನು ಡೀಲಿಟ್ ಮಾಡಿದ್ದ ಟ್ವಿಟ್ಟರ್ ಇದಕ್ಕೆ ಕಾರಣವನ್ನೂ ಕೂಡ ನೀಡಿರಲಿಲ್ಲ. ಆದರೆ ಟ್ವಿಟ್ಟರ್ ನಡೆಗೆ ಎಲ್ಲೆಡೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಚಿನಾರ್ ಕಾರ್ಪ್ಸ್ ನ ಖಾತೆಯನ್ನು ಮತ್ತೆ ಟ್ವಿಟ್ಟರ್ ರಿಸ್ಟೋರ್ ಮಾಡಿದೆ.

ಟ್ವಿಟ್ಟರ್ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಟ್ವಿಟ್ಟರ್ ನ ಈ ನಡೆ ಒಪ್ಪತಕ್ಕದಲ್ಲ ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದರು.

Scroll to load tweet…

ಇದೀಗ ಚಿನಾರ್ ಕಾರ್ಪ್ಸ್ ಅಧಿಕೃತ ಖಾತೆಯನ್ನು ರಿಸ್ಟೋರ್ ಮಾಡಿರುವ ಟ್ವಿಟ್ಟರ್, ವಿವಾದವನ್ನು ಸುಖಾಂತ್ಯಗೊಳಿಸಿದೆ.