Asianet Suvarna News Asianet Suvarna News

6 ರಿಂದ 10ರವರೆಗೆ ವಾಹನಗಳಿಗೆ ಅವಕಾಶ : ಕಂಡೀಷನ್ಸ್ ಅಪ್ಲೆ

  • ಕೋವಿಡ್ ಸೋಂಕು  ಹರಡುವ  ಗತಿ ಕಡಿಮೆ ಮಾಡಲು ಲಾಕ್‌ಡೌನ್ ಜಾರಿ
  •  ಬೆಳಗ್ಗೆ 6 ರಿಂದ   10 ಗಂಟೆವರೆಗೆ ವಾಹನ ಸಂಚಾರಕ್ಕೆ ನಿಯಮಾನುಸಾರ ಅನುಮತಿ 
  • ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾಹಿತಿ
vehicle  Allowed morning 6 to 10 Says Karnataka Minister basavaraj Bommai snr
Author
Bengaluru, First Published May 11, 2021, 3:02 PM IST

ಬೆಂಗಳೂರು (ಮೇ.11): ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವ ಗತಿ ಕಡಿಮೆ ಮಾಡಲು ಲಾಕ್‌ಡೌನ್ ಜಾರಿಯಲ್ಲಿದ್ದು, ಬೆಳಗ್ಗೆ 6 ರಿಂದ 10 ಗಂಟೆವರೆಗೆ ವಾಹನ ಸಂಚಾರಕ್ಕೆ ನಿಯಮಾನುಸಾರ ಅನುಮತಿ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿಂದು ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ 6-10 ಗಂಟೆವರೆಗೆ ಜನರು ಅಗತ್ಯ ವಸ್ತುಗಳ ಖರೀದಿಗೆ ತೆರಳಲು ರಿಯಾಯಿತಿ ಇದೆ. ಈ ವೇಳೆ ವಾಹನಗಳಿಗೆ ನಿಯಮಾನುಸಾರವಾಗಿ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು  ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಸುಮ್ಮನೆ ಹೊರ ಬಂದರೆ ಹುಷಾರ್‌: ವಾಹನದಲ್ಲಿ ಹೋಗುವಂತಿಲ್ಲ, ನಡೆದೇ ಹೋಗಬೇಕು! ..

ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಎಲ್ಲಾ ವಾಹನಗಳ ಸಂಚಾರವನ್ನು ಕಡಿಮೆ ಮಾಡಲಾಗುತ್ತಿದೆ. ನಿಯಮ ಮೀರಿ ಬಂದರೆ ಕಾನೂನು ಪ್ರಕಾರ ವೆಹಿಕಲ್ ಸೀಜ್ ಮಾಡುವುದು ಸೇರಿದಂತೆ ಇನ್ನಿತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. 

ಕರ್ನಾಟಕದಲ್ಲಿ ಅಪಾಯದ ಮಟ್ಟ ಮೀರಿತು ಕೊರೋನಾ; ಒಂದೇ ದಿನ 596 ಮಂದಿ ಸಾವು! ..

ಈಗಾಗಲೇ ಜನರ ಮೇಲೆ ಬಲ ಪ್ರಯೋಗ ಮಾಡದಂತೆ ಸೂಚನೆ ‌ನೀಡಲಾಗಿದೆ. ಅದನ್ನ ‌ಹೊರತುಪಡಿಸಿ ಇನ್ನಿತರ ಕಾನೂನು ಕ್ರಮ ತೆಗೆದುಕೊಳ್ಳಲು ತಿಳಿಸಿದ್ದೇವೆ.  ಜನರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು.   ಜನರು 14 ದಿನ ಕಟ್ಟು ನಿಟ್ಟಾಗಿ ಲಾಕ್ ಡೌನ್ ನಿಯಮ ಪಾಲನೆ ಮಾಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios