ಬೆಂಗಳೂರು ಜನತೆ ನಿದ್ದೆಗೆಡಿಸಿದ್ದ ಶಬ್ಧಕ್ಕೆ ಸಿಕ್ತು ಸ್ಪಷ್ಟಣೆ| ಭೂಕಂಪವಲ್ಲ, ಹವಾಮಾನ ಕಾರಣದಿಂದಲೂ ಕೇಳಿ ಬಂದ ಸದ್ದಲ್ಲ| ಎಚ್‌ಎಎಲ್‌ ರನ್‌ವೇನಲ್ಲಿ ಟೇಕ್‌ ಆಫ್ ಆದ ಸುಖೋಯ್ ಯುದ್ಧ ವಿಮಾನದಿಂದ ಉಂಟಾದ ಸದ್ದು

ಬೆಂಗಳೂರು(ಮೇ.20) ಬೆಂಗಳೂರಿಗರನ್ನು ಮಟ ಮಟ ಮಧ್ಯಾಹ್ನ ಬೆಚ್ಚಿ ಬೀಳಿಸಿದ್ದ ಶಬ್ಧಕ್ಕೇನು ಕಾರಣ ಎಂಬುವುದು ಕೊನೆಗೂ ಬಯಲಾಗಿದ್ದು, ಸಿಲಿಕಾನ್ ಸಿಟಿ ಜನರು ನಿಟ್ಟುಸಿರು ಬಿಡುವಂತಾಗಿದೆ.

"

ಹೌದು ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಸ್ಪೋಟದಂತಹ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್‌ ಹಳ್ಳಿ, ಇಂಧಿರಾನಗರ, ಹೆಬ್ಬಾಳ, ಜೆ. ಪಿ. ನಗರ, ಕೆ. ಆರ್‌ ಪುರಂ ಸೇರಿದಂತೆ ಅನೇಕ ಕಡೆ ಈ ಸದ್ದು ಜನರ ನಿದ್ದೆಗೆಡಿಸಿತ್ತು. ಭೂಕಂಪವಾಗಿರಬುದೆಂಬ ಚರ್ಚೆ ಹುಟ್ಟು ಹಾಕಿತ್ತು. ಅಷ್ಟರಲ್ಲೇ KSNDMC ಅಧಿಕಾರಿಗಳು ಇದು ಭೂಕಂಪ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು.. ಹೀಗಿರುವಾಗ ಶಬ್ಧ ಹೇಗೆ ಬಂದಿದ್ದು ಎಂಬ ಪ್ರಶ್ನೆ ಜನರ ಮನದಲ್ಲಿ ಹಾಗೇ ಉಳಿದಿತ್ತು. ಸದ್ಯ ಈ ಪ್ರಶ್ನೆಗೆ HAL ಸ್ಪಷ್ಟನೆ ನೀಡಿದೆ.

ಬೆಂಗಳೂರಿನಲ್ಲಿ ಭಯಾನಕ ಸದ್ದು, ಭೂಕಂಪವಲ್ಲ, ಹೆದರೋ ಅಗತ್ಯವಿಲ್ಲ...!

Scroll to load tweet…

"

HAL ಸ್ಪಷ್ಟನೆ

ಈ ಸಂಭಂದ ಪ್ರತಿಕ್ರಿಯಿಸಿರುವ HAL 'ಸುಖೋಯ್ 30 ಯುದ್ಧ ವಿಮಾನನಿಂದಲೇ ಶಬ್ದ ಕೇಳಿ ಬಂದಿತ್ತು. ಯುದ್ಧ ವಿಮಾನ ಟೇಕಾಫ್ ವೇಳೆ ಉಂಟಾದ ಶಬ್ದ ಇದಾಗಿದೆ. HAL ರನ್​ವೇನಲ್ಲಿ ಸುಖೋಯ್​ 90 ಡಿಗ್ರಿ ಟೇಕ್ ಆಫ್ ಮಾಡಿದಾಗ ಶಬ್ದ ಸೃಷ್ಟಿಯಾಗಿದೆ. 90 ಡಿಗ್ರಿ ಟೇಕಾಫ್ ಮಾಡಿದಾಗ 10 ಕಿಮೀ ವರೆಗೂ ಶಬ್ದ ಕೇಳಿಸುತ್ತದೆ' ಎಂದು ಸ್ಪಷ್ಟನೆ ನೀಡಿದೆ.

Scroll to load tweet…

ಟ್ವಿಟರ್‌ನಲ್ಲೂ ಈ ಬಗ್ಗೆ ತೀವ್ರ ಚರ್ಚೆಯಾಗಿದ್ದು, ಅಲ್ಲರೂ ಈ ಬಗ್ಗೆ ತಮಗೆ ತೋರಿದ ಸ್ಪಷ್ಟನೆ ನೀಡಲಾರಂಭಿಸಿದ್ದರು.