Asianet Suvarna News Asianet Suvarna News

‘ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ’

ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.

Strict Action Against Who Take Bribe From Farmers
Author
Bengaluru, First Published Jan 5, 2020, 9:34 AM IST

ಬೆಂಗ​ಳೂರು [ಜ.05]: ಕೈಗಾ​ರಿಕಾ ಪ್ರದೇ​ಶ​ಕ್ಕಾಗಿ ಸ್ವಾಧೀನ ಪಡಿ​ಸಿ​ಕೊಂಡ ಜಮೀ​ನಿನ ರೈತ​ರಿಗೆ ಪರಿ​ಹಾರ ಧನ ನೀಡಲು ಲಂಚ ಕೇಳುವ ಅಧಿ​ಕಾ​ರಿ​ಗಳ ವಿರುದ್ಧ ಕಠಿಣ ಕ್ರಮ ಕೈಗೊ​ಳ್ಳಲಾ​ಗು​ವುದು ಎಂದು ಕೈಗಾ​ರಿಕೆ ಸಚಿವ ಜಗ​ದೀಶ್‌ ಶೆಟ್ಟರ್‌ ಎಚ್ಚ​ರಿಕೆ ನೀಡಿ​ದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀ​ಪದ ಹರಲೂರು ಮುದ್ದೇನಹಳ್ಳಿಯಲ್ಲಿನ ರಕ್ಷಣೆ, ಏರೋಸ್ಪೇಸ್‌, ಹೈಟೆಕ್‌ ಇಂಡಸ್ಟ್ರಿ ಬಡಾ​ವ​ಣೆ​ಗಳ ಕೈಗಾರಿಕಾ ಪ್ರದೇಶಕ್ಕೆ ಜಗ​ದೀಶ್‌ ಶೆಟ್ಟರ್‌ ಶನಿ​ವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿ​ದರು.

ಈ ವೇಳೆ ಮಾತ​ನಾ​ಡಿ, ರೈತ​ರಿಂದ ಭೂಮಿ​ ಸ್ವಾಧೀ​ನ​ಪ​ಡಿ​ಸಿ​ಕೊಂಡ ನಂತರ ಅವ​ರಿಗೆ ಪರಿ​ಹಾರ ನೀಡು​ವುದು ಸರ್ಕಾರದ ಕರ್ತವ್ಯ. ಆದರೆ ಪರಿ​ಹಾರ ಧನ ಬಿಡು​ಗಡೆ ಮಾಡು​ವಾಗ ಅಧಿ​ಕಾ​ರಿ​ಗಳು ಹಣ ಕೇಳಿದರೆ ದೂರು ನೀಡಿ. ತಕ್ಷ​ಣವೇ ಅವರ ವಿರುದ್ಧ ಕ್ರಮ ಕೈಗೊ​ಳ್ಳು​ತ್ತೇನೆ ಎಂದು ಎಚ್ಚ​ರಿ​ಸಿ​ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸರ್ಕಾರ ನೂತನ ಕೈಗಾರಿಕಾ ಪ್ರದೇಶಕ್ಕಾಗಿ 1,800 ಎಕರೆ ಪ್ರದೇಶವನ್ನು ಸ್ವಾಧಿನಪಡಿಸಿಕೊಂಡಿದ್ದು, ಹಲವು ಬಗೆಯ ಕೈಗಾರಿಕೆಗಳನ್ನು ಸ್ಥಾಪಿಸಲಾ​ಗು​ತ್ತಿದೆ. ಇದ​ರಿಂದ ರೈತರ ಮಕ್ಕಳಿಗೆ ಉದ್ಯೋಗ ಸಿಗು​ತ್ತದೆ. ರಾಜ್ಯ ಸರ್ಕಾರ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಹೀಗಾಗಿ ರಾಜ್ಯಕ್ಕೆ ವಿದೇಶಿ ಬಂಡವಾಳ ಹರಿದು ಬರ​ಲಿದೆ. ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಈ ಪ್ರದೇಶ ಹೆಚ್ಚು ಅಭಿವೃದ್ಧಿ ಹೊಂದ​ಲಿದೆ ಎಂಬ ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಇದೇ ವೇಳೆ ಹರಳೂರು, ಪೋಲನಹಳ್ಳಿ, ಮುದ್ದೇನಹಳ್ಳಿ ಮತ್ತಿ​ತರ ಕಡೆ ಭೇಟಿ ನೀಡಿ ರೈತರ ಜತೆ ಮಾತುಕತೆ ನಡೆಸಿದರು. ಸಿಇ​ಟಿ​ಯುಎಂ, ವಿಪ್ರೋ, ಶೆಲ್‌ ಹಾಗೂ ಏರೋಸ್ಪೇಸ್‌ ಕೈಗಾರಿಕೆಗಳಲ್ಲಿನ ಕಾಮ​ಗಾ​ರಿ​ಗ​ಳನ್ನು ಪರಿಶೀಲಿಸಿ​ದ​ರು. ಭೂಮಿ ನೀಡಿದ ರೈತರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇ​ಶಿ​ಸಿ​ದ​ರು.

Follow Us:
Download App:
  • android
  • ios