Asianet Suvarna News Asianet Suvarna News

ಪಡಿತರದಾರರಿಗೆ ಮತ್ತಷ್ಟು ಲಾಭ?

ಪಡಿತರ ವ್ಯವಸ್ಥೆಯಲ್ಲಿ ಉಪ್ಪು, ಸಕ್ಕರೆ ಜೊತೆ ಇನ್ನಷ್ಟು ವಸ್ತುಗಳನ್ನು ವಿತರಿಸಲು ಸರ್ಕಾರ ಚಿಂತಿಸಿದೆ.

state govt may add coffee and tea powder in ration
Author
Bangalore, First Published Jan 27, 2019, 10:16 AM IST

ಹಾವೇರಿ[ಜ.27]: ಪಡಿತರ ವ್ಯವಸ್ಥೆಯಲ್ಲಿ ಉಪ್ಪು, ಸಕ್ಕರೆ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಟೀ, ಕಾಫಿ ಪುಡಿ ವಿತರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಖಾತೆ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಸಿಎಂ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪಡಿತರ ಚೀಟಿಯಲ್ಲಿ ತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರ ಅಳವಡಿಸುವ ಸಲಹೆ ಉತ್ತಮವಾಗಿದ್ದು, ಈ ನಿಟ್ಟಿನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

Follow Us:
Download App:
  • android
  • ios