ಹಾವೇರಿ ಗ್ಯಾಂಗ್ರೇಪ್ ಪ್ರಕರಣದ ತನಿಖೆಗೆ ಎಸ್ಐಟಿ ಬೇಕಿಲ್ಲ: ಡಿಜಿಪಿ
ಹಾವೇರಿ ಜಿಲ್ಲೆಯ ಅತ್ಯಾಚಾರ ಪ್ರಕರಣ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಅಲ್ಲದೆ ಎಲ್ಲ ಆರೋಪಿಗಳ ಬಂಧನ ಸಹ ಆಗಿದೆ ಎಂದ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್
![SIT Not Needed to Investigate the Haveri Gangrape Case Says DGP Alok Kumar grg SIT Not Needed to Investigate the Haveri Gangrape Case Says DGP Alok Kumar grg](https://static-ai.asianetnews.com/images/01gdcw0z5b96n5x7vzx52ajam7/untitled-design--38-_363x203xt.jpg)
ಬೆಂಗಳೂರು(ಜ.26): ಹಾವೇರಿ ಜಿಲ್ಲೆಯ ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (ಎಸ್ಐಟಿ)ದ ರಚನೆ ಅಗತ್ಯವಿಲ್ಲ. ಪ್ರಕರಣದಲ್ಲಿ ಎಲ್ಲ ಆರೋಪಿಗಳ ಬಂಧನವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಜಿಪಿ ಅವರು, ಹಾವೇರಿ ಜಿಲ್ಲೆಯ ಅತ್ಯಾಚಾರ ಪ್ರಕರಣ ಸಂಬಂಧ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಅಲ್ಲದೆ ಎಲ್ಲ ಆರೋಪಿಗಳ ಬಂಧನ ಸಹ ಆಗಿದೆ ಎಂದರು.
ಗ್ಯಾಂಗ್ರೇಪ್: ಎಸ್ಐಟಿ ತನಿಖೆಗೆ ಬಿಜೆಪಿ ಪಟ್ಟು: ಅಶೋಕ್, ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ
ಈ ಘಟನೆ ವಿಷಯ ತಿಳಿದ ಕೂಡಲೇ ಜಿಲ್ಲೆಗೆ ಐಜಿಪಿ ಭೇಟಿ ನೀಡಿದ್ದರು. ಅಲ್ಲೇ ಕೆಲ ದಿನ ಮೊಕ್ಕಾಂ ಹೂಡಿ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ಸಹ ಐಜಿಪಿ ನಡೆಸಿದ್ದರು. ಎಸ್ಐಟಿ ರಚಿಸಿದರೂ ಅದೇ ಪೊಲೀಸರು ಕೆಲಸ ಮಾಡಬೇಕಿದೆ. ಹೀಗಾಗಿ ಎಸ್ಐಟಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.