‘2019ರಲ್ಲೂ ಮೈಸೂರು-ಕೊಡಗು ಕ್ಷೇತ್ರಕ್ಕೆ ನಾನೇ ಸಂಸದ’|ಮುಂದಿನ ಬಾರಿ ಪ್ರಮೋದಾದೇವಿ ಒಡೆಯರ್ ಗೆ ಬಿಜೆಪಿ ಟಿಕೆಟ್?| ಮಾಧ್ಯಮಗಳ ವಿರುದ್ಧ ಹರಿಹಾಯ್ದ ಸಂಸದ ಪ್ರತಾಪ್ ಸಿಂಹ| ‘ನೀವು ಕಲ್ಲು ಹೊಡೆದರೆ ಅದರಲ್ಲೇ ನಾನು ಫೌಂಡೇಶನ್ ಕಟ್ತಿನಿ’|ಹಾಲಿ ಸಂಸದರಿಗೆ ಟಿಕೆಟ್ ಪಕ್ಕಾ ಎಂದ ಯಡಿಯೂರಪ್ಪ| 

ಮೈಸೂರು(ಜ.05): ಮುಂದಿನ ಬಾರಿಯೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ತಾವೇ ಸಂಸದ ಎಂದು ಬಿಜೆಪಿಯ ಪ್ರತಾಪ ಸಿಂಹ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2019ರಲ್ಲಿ ಮುಂದಿನ ಬಾರಿ ಬಿಜೆಪಿ ಪ್ರಮೋದಾದೇವಿ ಒಡೆಯರ್ ಅವರಿಗೆ ಟಿಕೆಟ್ ನೀಡಲಿದೆ ಎಂಬ ಮಾಧ್ಯಮಗಳ ವರದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಸಿಂಹ, ಮುಂದಿನ ಮೈಸೂರು-ಕೊಡಗು ಸಂಸದ ನಾನೇ ಎಂದು ಗುಡುಗಿದರು.

ಕೆಲವು ಮಾಧ್ಯಮಗಳ ತಲೆಯಲ್ಲಿ ಕಸ ತುಂಬಿದೆ. ಅದನ್ನೇ ತಮ್ಮ ಪತ್ರಿಕೆಗಳಲ್ಲಿ ಬರೆಯುತ್ತಾರೆ ಮತ್ತು ದೃಶ್ಯ ಮಾಧ್ಯಮಗಳು ಸ್ಪೆಶಲ್ ಸ್ಟೋರಿ ಹೆಸರಲ್ಲಿ ಬಿತ್ತರಿಸುತ್ತವೆ ಎಂದು ಸಿಂಹ ಈ ವೇಳೆ ಹರಿಹಾಯ್ದರು.

"<br/>ನನಗೆ ಕಲ್ಲು ಹೊಡೆದರೆ ಅದರಲ್ಲೇ ನಾನು ಫೌಂಡೇಶನ್ ಕಟ್ತಿನಿ ಎಂದು ಮಾರ್ಮಿಕವಾಗಿ ನುಡಿದ ಸಿಂಹ, ಮುಂಧಿನ ಲೋಕಸಭಾ ಚುನಾವಣೆಯಲ್ಲೂ ಮತ್ತೆ ನಾನೇ ಗೆಲ್ಲುತ್ತೇನೆಂದು ವಿಶ್ವಾಸ ವ್ಯಕ್ತಪಡಿಸಿದರು. 

ನಾವು ಹಾಲಿ 15 ಜನ ಬಿಜೆಪಿ ಸಂಸದರಿದ್ದು, ಈ 15 ಕ್ಷೇತ್ರದ ಜೊತೆಗೆ ಮತ್ತಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಸಿಂಹ ಭರವಸೆ ನೀಡಿದರು. ಈಗಾಗಲೇ ಎಲ್ಲಾ ಹಾಲಿ ಎಂಪಿಗಳಿಗೆ ಟಿಕೆಟ್ ಎಂದು ಯಡಿಯೂರಪ್ಪ ಹೇಳಿದ್ದಾರೆ ಎಂದು ಸಿಂಹ ಸ್ಪಷ್ಟಪಡಿಸಿದರು. <br/>